

ಕೊಪ್ಪಳ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಕಾವ್ಯಾನಂದ ಉದ್ಯಾನವನದ ಆವರಣದಲ್ಲಿ ಶಿಕ್ಷಕರ ಕಲಾಸಂಘವು ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನ ಸಲ್ಲಿಸಿತು.
ಸಾಲುಮರದ ತಿಮ್ಮಕ್ಕನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷಗಳ ಮೌನ ಸಲ್ಲಿಸಲಾಯಿತು.
ಪುಷ್ಪನಮನದ ಬಳಿಕ ಮಾತನಾಡಿದ ಶಿಕ್ಷಕ ಪ್ರಾಣೇಶ ಪೂಜಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಶಿಕ್ಷಕರ ಕಲಾ ಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೊಳಿ ಬಸಯ್ಯ, ಬಾಳಪ್ಪ ಕಾಳೆ, ಮಾರುತಿ ಆರೇರ, ಪಠಾಣ್, ಗುರುರಾಜ ಕುಲಕರ್ಣಿ, ಮಾರುತಿ ಮ್ಯಾಗಳಮನಿ, ಸಾಲುಮರದ ತಿಮ್ಮಕ್ಕನವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಡಿ. ಶ್ರೀಪತಿ ಹಳ್ಳಿಕೇರಿ, ಗುರುಸ್ವಾಮಿ, ಮಂಜುಳಾ ಬಣ್ಣದ ಬಾವಿ, ಮಂಜುಳಾ ಶ್ಯಾವಿ, ಪ್ರಲ್ಹಾದ, ಮಹಾಂತೇಶ ಚಳ್ಳಮರದ ಸಾರ್ವಜನಿಕರು ಹಾಜರಿದ್ದರು. ನಾಗರಾಜನಾಯಕ ಡೊಳ್ಳಿನ ನಿರೂಪಿಸಿದರು ಮಂಜುನಾಥ ಪೂಜಾರ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್