ರಾಯಚೂರಿನಲ್ಲಿ ಕೆಟಗರಿ- 2 ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ನನ್ನ ಕನಸಾಗಿತ್ತು- ಎನ್ಎಸ್ ಬೋಸರಾಜು
ರಾಯಚೂರು, 16 ನವೆಂಬರ್ (ಹಿ.ಸ.) : ಆ್ಯಂಕರ್ : ಆದುನಿಕ‌ ಜಗತ್ತಿನಲ್ಲಿ ವೈಜ್ಞಾನಿಕ ಶಿಕ್ಷಣವು ಸಮಾಜ ಮತ್ತು ದೇಶದ ಪ್ರಗತಿಗೆ ಅಗತ್ಯವಾಗಿದೆ. ವಿಜ್ಞಾನವು ಜೀವನದ ಒಂದು ಭಾಗವಾಗಿರುವುದರಿಂದ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು, ಕೌಶಲ್ಯಗಳನ್ನು ಕಲಿಸುವುದು ನಮ್ಮ ಇಲಾಖೆ
ರಾಯಚೂರಿನಲ್ಲಿ ಕೆಟಗರಿ- 2 ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ನನ್ನ ಕನಸಾಗಿತ್ತು- ಎನ್ಎಸ್ ಬೋಸರಾಜು


ರಾಯಚೂರಿನಲ್ಲಿ ಕೆಟಗರಿ- 2 ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ನನ್ನ ಕನಸಾಗಿತ್ತು- ಎನ್ಎಸ್ ಬೋಸರಾಜು


ರಾಯಚೂರು, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಆದುನಿಕ‌ ಜಗತ್ತಿನಲ್ಲಿ ವೈಜ್ಞಾನಿಕ ಶಿಕ್ಷಣವು ಸಮಾಜ ಮತ್ತು ದೇಶದ ಪ್ರಗತಿಗೆ ಅಗತ್ಯವಾಗಿದೆ. ವಿಜ್ಞಾನವು ಜೀವನದ ಒಂದು ಭಾಗವಾಗಿರುವುದರಿಂದ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು, ಕೌಶಲ್ಯಗಳನ್ನು ಕಲಿಸುವುದು ನಮ್ಮ ಇಲಾಖೆಯ ಉದ್ದೇಶವಾಗಿದೆ. ರಾಯಚೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ನನ್ನ ಕನಸಾಗಿತ್ತು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸದಸ್ಯರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು‌.

ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿ (NCSM) ಸಹಯೋಗದೊಂದಿಗೆ, ರಾಯಚೂರು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ರಾಯಚೂರು ಪ್ರಾದೇಶಿಕ ವಿಜ್ಞಾನ ಕೇಂದ್ರ ಕೆಟಗರಿ-2 ಕಾಮಗಾರಿಗೆ ಸಚಿವ ಎನ್ ಎಸ್ ಬೋಸರಾಜು ಅವರು ಭೂಮಿ ಪೂಜೆ ನೆರವೇರಿಸಿದರು.

ವೈಜ್ಞಾನಿಕ ತಿಳುವಳಿಕೆ ಇಲ್ಲದೆ ನಾವು ಏನನ್ನು ಮಾಡಲು ಸಾಧ್ಯವಿಲ್ಲ. ದೇಶ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ವೃದ್ಧಿಯಾಗಬೇಕಾದರೆ ವಿಜ್ಞಾನದ ಮಾಹಿತಿಯಿದ್ದರೆ ಮಾತ್ರ ಸಾಧ್ಯ. ಹಾಗಾಗಿ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸೃಜನಶೀಲತೆ ಮತ್ತು ವಿಜ್ಞಾನ ಪರಿಕಲ್ಪನೆಯನ್ನು ಬೆಳೆಸುವುದು ಅಗತ್ಯವಾಗಿದೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಜುಬೇನ್ ಮೊಹಪೋತ್ರ, ಮಾಜಿ ಶಾಸಕರಾದ ಪಾಪರಡ್ಡಿ, ಹಿರಿಯರಾದ ಪಾರಾಮಾಲ್‌ ಸುಖಾಣಿ ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ, ಉಪ ಮಹಾಪೌರರಾದ ಶಾಜಿದ್ ಸಮೀರ್, ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂನ ಡಾಮ ರಾಜು ಬಾಸ್ಕರ್, ತಾಂತ್ರಿಕ ವಿಭಾಗದ ಮುಖ್ಯಸ್ತರಾದ ಡಾ ರಾಜಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ಸದಾಶಿವ ಪ್ರಭು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆಡಿ ಬಡಿಗೇರ್, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ರಮೇಶ, ಜಿ ಶಿವಮೂರ್ತಿ, ಸೇರಿ ವಿಜ್ಞಾನ ಕೇಂದ್ರದ ಅಧಿಕಾರಿಗಳಾದ ಅಜಿತ್ ಸೇರಿ‌ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande