ಗದಗ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಗೆ ಸಂಬಂದಿಸಿದಂತೆ ಮುಖ್ಯ ಮಂತ್ರಿಗಳು ತಮ್ಮ 2025/26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 397ರಲ್ಲಿ ಗ್ರಾಮೀಣ ಕ್ರೀಡೆಗಳನ್ನು ಪೋತ್ಸಾಹಿಸಲು ಹಾಗೂ ಉತ್ತೇಜಿಸಲು ಎತ್ತಿನ ಬಂಡಿ ಕ್ರಿಡೆಯನ್ನು ರಾಜ್ಯದ ಜಿಲ್ಲೆಗಳಲ್ಲಿ ಆಯೋಜಿಸುವ 15 ಸಂಘ ಸಂಸ್ಥೆಗಳಿಗೆ ತಲಾ 2 ಲಕ್ಷಗಳಂತೆ ಅನುದಾನ ನೀಡಿ ಪ್ರೋತ್ಸಾಹಿಸಲಾಗುವುದು.
ಗದಗ ಜಿಲ್ಲೆಯಲ್ಲಿ ಎತ್ತನ ಬಂಡಿ ಕ್ರೀಡೆಯನ್ನು ಆಯೋಜಿಸಲು ಆಸಕ್ತಿಯುಳ್ಳವರು ತಮ್ಮ ಸಂಘ ಸಂಸ್ಥೆಯ ಪೂರ್ಣ ವಿವರವನ್ನು ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೆ.ಎಚ್ ಪಾಟೀಲ ಜಿಲ್ಲಾ ಕ್ರಿಡಾಂಗಣ ಗದಗ ಇಲ್ಲಿಗೆ ದಿನಾಂಕ 16/10/2025 ರೊಳಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / lalita MP