ವಿಜಯಪುರ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉದ್ಯಮ ಪೋರ್ಟಲ್ ನೋಂದಾಯಿತ ಮೊದಲ ೧೨೦ ಎಂ.ಎಸ್.ಎ.ಇ ಗಳಿಗೆ ಕೆ.ಎಸ್ಎಂಸಿ ಮತ್ತು ಎ ಬೆಂಗಳೂರು ಅವರ ಸಹಯೋಗದಲ್ಲಿ ಎಕ್ಸಪೋರ್ಟ ಪ್ರೊಮೋಷನ್ ಮತ್ತು ಫೆಸಿಲಿಟೀಸ್ ವಿಷಯದ ಕುರಿತು ಅಕ್ಟೋಬರ ೯ ರಂದು ಇಲಕಲ್ಲ ಪಟ್ಟಣದ ಹೋಟಲ್ ಝೀಪ್ ಹಾಗೂ ೧೦ ರಂದು ನವನಗರದ ಜಿಲ್ಲಾ ಪಂಚಾಯತ, ನೂತನ ಸಭಾಭವನದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕೇವಲ ೧೨೦ ಎಂ.ಎಸ್.ಎ.ಇ ಗಳಿಗೆ ಅವಕಾಶವಿರುವುದರಿಂದ ಕೂಡಲೇ ಆಸಕ್ತ ಉದ್ದಿಮೆದಾರನು, ಅಕ್ಟೋಬರ ೭ ರಂದು ಸಂಜೆ ೫ ಗಂಟೆಯೊಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಬಾಗಲಕೋಟೆ ದೂಸಂ.೦೮೩೫೪-೨೦೦೨೯೪, ೬೩೬೧೩೮೫೪೫೯ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande