ಧಾರವಾಡದಲ್ಲಿ ಏಪ್ರಿಲ್ 25–26ರಂದು ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆ
ವಿಜಯಪುರ, 15 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕದ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕರ್ನಾಟಕ ನಾಟಕ ಜನಪದ ಕಲಾವಿದರ ಅಭಿವೃದ್ಧಿ ಸಂಘ ಹುಬ್ಬಳ್ಳಿ ಸಂಸ್ಥೆಯ ವತಿಯಿಂದ ಏಪ್ರಿಲ್ 25
ಧಾರವಾಡದಲ್ಲಿ ಏಪ್ರಿಲ್ 25–26ರಂದು ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆ


ವಿಜಯಪುರ, 15 ಮಾರ್ಚ್ (ಹಿ.ಸ.)

ಆ್ಯಂಕರ್ : ಕರ್ನಾಟಕದ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಕರ್ನಾಟಕ ನಾಟಕ ಜನಪದ ಕಲಾವಿದರ ಅಭಿವೃದ್ಧಿ ಸಂಘ ಹುಬ್ಬಳ್ಳಿ ಸಂಸ್ಥೆಯ ವತಿಯಿಂದ ಏಪ್ರಿಲ್ 25 ಮತ್ತು 26, 2026ರಂದು ಈ ಸ್ಪರ್ಧೆ ನಡೆಯಲಿದೆ ಎಂದು ತನು ಪೌಂಡೇಷನ್ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕನ್ನಡದ ಪೌರಾಣಿಕ ನಾಟಕಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಬೇಡಿಕೆ ಇದ್ದು, ಇಂತಹ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಸ್ಥೆಯ ಸಂಸ್ಥಾಪಕರಾದ ತೆರೆಸಮ್ಮ ಡಿಸೋಜಾ ಅವರ ಪುಣ್ಯಸ್ಮರಣೆಯ ನೆನಪಿನೋತ್ಸವದ ಅಂಗವಾಗಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.

ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಪೌರಾಣಿಕ ನಾಟಕಗಳ ಪ್ರಸಿದ್ಧ ಪಾತ್ರಗಳನ್ನು ಏಕವ್ಯಕ್ತಿಯಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸ್ಪರ್ಧೆಯ ಮೂಲಕ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಡಾ. ಹೆಲೆನ್ ಮೈಸೂರು ತಿಳಿಸಿದ್ದಾರೆ.

ಬಹುಮಾನಗಳು:

ಪ್ರಥಮ ಬಹುಮಾನ: ₹10,000

ದ್ವಿತೀಯ ಬಹುಮಾನ: ₹5,000

ತೃತೀಯ ಬಹುಮಾನ: ₹3,000

ಸ್ಪರ್ಧೆಯ ನಿಯಮಗಳು:

ಏಕವ್ಯಕ್ತಿ ಪಾತ್ರವು ಕಡ್ಡಾಯವಾಗಿ ಪೌರಾಣಿಕ ನಾಟಕದ ಪ್ರಸಂಗವಾಗಿರಬೇಕು ಮತ್ತು ಅರ್ಜಿಯಲ್ಲಿ ನಾಟಕಕಾರ ಹಾಗೂ ನಾಟಕದ ಹೆಸರನ್ನು ನಮೂದಿಸಬೇಕು.

ವಯೋಮಿತಿ:

ಜೂನಿಯರ್: 6 ರಿಂದ 18 ವರ್ಷ

ಸೀನಿಯರ್: 19 ರಿಂದ 70 ವರ್ಷ

ಲಿಂಗಭೇದವಿಲ್ಲದೆ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು.

ಪಾತ್ರದ ವೇಷಭೂಷಣ, ಅಲಂಕಾರ ಮತ್ತು ಸಂಗೀತ ವ್ಯವಸ್ಥೆ ಸ್ಪರ್ಧಿಗಳದೇ ಆಗಿರುತ್ತದೆ.

ಪ್ರದರ್ಶನದ ಗರಿಷ್ಠ ಅವಧಿ 10 ನಿಮಿಷ; ತೀರ್ಪುಗಾರರ ತೀರ್ಮಾನವೇ ಅಂತಿಮ.

ಪ್ರವೇಶ ಶುಲ್ಕ ₹2000.

ಸ್ಪರ್ಧೆ ಕನ್ನಡ ಸಾಹಿತ್ಯ ಪರಿಷತ್ತಿನ ವರಣದಲ್ಲಿರುವ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜೂನಿಯರ್ ವಿಭಾಗ: ಏಪ್ರಿಲ್ 25, ಬೆಳಿಗ್ಗೆ 10:30

ಸೀನಿಯರ್ ವಿಭಾಗ: ಏಪ್ರಿಲ್ 26, ಬೆಳಿಗ್ಗೆ 10:30 ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ತನು ಪೌಂಡೇಷನ್, ಈ ಕುರಿತು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ ನೀಡಿದ್ದಾರೆ. 7624820252, 9902096451, 8197137309 ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande