
ಬೆಂಗಳೂರು, 21 ಜನವರಿ (ಹಿ.ಸ.) :
ಆ್ಯಂಕರ್ : ಮನರೇಗಾ ಯೋಜನೆ ಮರುಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹೋರಾಟ ಆರಂಭಿಸಿದ್ದು, ಜನವರಿ 27ರಂದು ಫ್ರೀಡಂ ಪಾರ್ಕ್ನಿಂದ ರಾಜಭವನದವರೆಗೆ ‘ರಾಜಭವನ ಚಲೋ – ಮನರೇಗಾ ಬಚಾವ್ ಸಂಗ್ರಾಮ’ ಹಮ್ಮಿಕೊಳ್ಳಲಾಗಿದೆ.
ಬಡ ಕಾರ್ಮಿಕರ ಉದ್ಯೋಗ ಖಾತರಿ ಹಕ್ಕು ರಕ್ಷಣೆ ಹಾಗೂ ಪಂಚಾಯಿತಿಗಳ ಅಧಿಕಾರ ಉಳಿಸುವ ಉದ್ದೇಶದಿಂದ ಈ ಹೋರಾಟ ಕೈಗೊಳ್ಳಲಾಗಿದೆ. ಮನರೇಗಾ ಯೋಜನೆ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಜನಧ್ವನಿ ಎತ್ತುವ ಸಂಕಲ್ಪವನ್ನು ಕಾಂಗ್ರೆಸ್ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa