ಉದ್ಯಾನವನಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ
ಉದ್ಯಾನವನಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ
ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾನುವಾರ ಸರ್ವಜ್ಞ ಉದ್ಯಾನವನ ಭೇಟಿ ನೀಡಿ ಗಿಡ ನೆಟ್ಟರು.


ಕೋಲಾರ, ಸೆಪ್ಟೆಂಬರ್ 0೭ (ಹಿ.ಸ) :

ಆ್ಯಂಕರ್ : ನಗರದ ಪ್ರಮುಖ ಉದ್ಯಾನವನಗಳ ಸ್ಥಿತಿಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಭಾನುವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿಗಳು ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಭೇಟಿಯು, ಇಂದಿನಿ0ದ ಆರಂಭಗೊ0ಡ ‘ಸ್ವಚ್ಛತಾ ಹಿ ಸೇವಾ' ಆಂದೋಲನದ ಭಾಗವಾಗಿತ್ತು. ಅಕ್ಟೋಬರ್ ೨ ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಕೋಲಾರದಲ್ಲಿ ಒಟ್ಟು ೧೯ ಪಾರ್ಕ್ಗಳಿವೆ.

ಪಾರ್ಕ್ಗಳಲ್ಲಿ ಅನಿಯಮಿತವಾಗಿ ಬೆಳೆದ ಗಿಡ-ಮರಗಳನ್ನು ಕತ್ತರಿಸಿ ಸರಿಪಡಿಸಲು ಡಿಸಿ ಸೂಚಿಸಿದರು. ಅಲ್ಲದೆ, ನಡಿಗೆ ಪಥವನ್ನು ಸಮತಟ್ಟುಗೊಳಿಸಿ, ನಡೆದಾಡುವವರಿಗೆ ಅನುಕೂಲ ಕಲ್ಪಿಸಲು ಸೂಚಿಸಲಾಯಿತು. ಸುಮಾರು ೮೫ ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್ನಲ್ಲಿರುವ ಬ್ಯಾಂಡ್ ಸ್ಟಾಂಡ್ ಮತ್ತು ರೇಡಿಯೋ ಕಿಯೋಸ್ಕ್ ಅನ್ನು ದುರಸ್ತಿಪಡಿಸಿ ಬಣ್ಣ ಹಚ್ಚಿಸುವಂತೆ ತಿಳಿಸಿದರು. ವಾರಾಂತ್ಯಗಳಲ್ಲಿ ಇಂತಹ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸುವAತೆಯೂ ಸಲಹೆ ನೀಡಿದರು.

ಎಲ್ಲಾ ಪಾರ್ಕ್ಗಳಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಉತ್ತಮವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲದಲ್ಲಿ ಪಾರ್ಕ್ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಕೊಳಚೆ ನೀರು ಕಾಲುವೆಗಳಲ್ಲಿ ಕಸ ಸೇರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ನಗರದ ಸೂಕ್ಷö್ಮ ಪ್ರದೇಶಗಳಲ್ಲಿ ಕಸ ಸುರಿಯುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಡಿಸಿ ಸೂಚಿಸಿದರು. ಇಂತಹ ಸ್ಥಳಗಳಲ್ಲಿ ನಗರಸಭೆ ಅಧಿಕಾರಿಗಳ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಯನ್ನು ನಿಯೋಜಿಸಿ ಕಣ್ಗಾವಲು ವಹಿಸುವಂತೆ ನಿರ್ದೇಶನ ನೀಡಿದರು.

ಹದಿನೈದನೇ ಹಣಕಾಸು ಯೋಜನೆಯಡಿ ‘ಅಮೃತ್ ನಗರೋತ್ಥಾನ' ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲದೆ, ಪಾರ್ಕ್ಗಳಲ್ಲಿ ಸಂಗ್ರಹವಾಗುವ ಉದುರಿದ ಎಲೆಗಳು ಮತ್ತು ಹಸಿ ಕಸವನ್ನು ಪಾರ್ಕ್ನ ಒಂದು ಮೂಲೆಯಲ್ಲಿ ಗುಂಡಿ ತೋಡಿ ಸಂಗ್ರಹಿಸಿದರೆ ಅದರಿಂದ ಸಾವಯವ ಗೊಬ್ಬರ ತಯಾರಿಸಬಹುದು ಎಂದು ಸಲಹೆ ನೀಡಿದರು.

ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಸಾರ್ವಜನಿಕರ ಸಹಕಾರ ಇಲ್ಲದೆ ಸ್ವಚ್ಛತೆ ಸಾಧ್ಯವಿಲ್ಲ. ಆದ್ದರಿಂದ, ನಗರಸಭೆ ಅಧಿಕಾರಿಗಳೊಂದಿಗೆ ನಾಗರಿಕರು ಕೈಜೋಡಿಸಬೇಕು. ಪಾರ್ಕ್ಗಳನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡುವ ಹಾಗೂ ವ್ಯಾಯಾಮ ಪರಿಕರಗಳನ್ನು ಬಳಸುವ ಕ್ರಮ ಕುರಿತ ಫಲಕಗಳನ್ನು ಅಳವಡಿಸುವಂತೆಯೂ ಸೂಚಿಸಲಾಯಿತು.

ನಗರದ ಸಮಾನ ಮನಸ್ಕರು ಸೇರಿ ಸಮಿತಿ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಆಸಕ್ತಿ ವಹಿಸುವಂತೆ ಡಿಸಿ ಮನವಿ ಮಾಡಿದರು. ಮಕ್ಕಳಿಗೆ ಇದಕ್ಕಿಂತ ಉತ್ತಮ ಸ್ಥಳ ಸಿಗಲು ಸಾಧ್ಯವಿಲ್ಲ ಎಂದರು.

ಸ್ವಚ್ಛತಾ ಆಂದೋಲನವು ಅಕ್ಟೋಬರ್ ೨ ರವರೆಗೆ ನಡೆಯಲಿದ್ದು, ಪ್ರತಿಯೊಬ್ಬರೂ ‘ಸ್ವಚ್ಛ ಭಾರತ, ಸ್ವಚ್ಛ ಕೋಲಾರ' ಎಂಬ ಧ್ಯೇಯದೊಂದಿಗೆ ಇದರಲ್ಲಿ ಪಾಲ್ಗೊಳ್ಳಬೇಕು. ಸ್ವಚ್ಛತೆ ಅಭಿಯಾನ ವ್ಯಕ್ತಿ ಮತ್ತು ಮನೆಗಳಿಂದಲೇ ಆರಂಭವಾಗಬೇಕು ಎಂದು ಡಾ. ಎಂ. ಆರ್. ರವಿ ತಿಳಿಸಿದರು.

ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲಾ ಉದ್ಯಾನಗಳಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಶ್ರೀನಿವಾಸ್, ನಗರಸಭೆ ಆಯುಕ್ತ ನವೀನ್ ಚಂದ್ರ ಮತ್ತು ಆರೋಗ್ಯ ನಿರೀಕ್ಷಕ ನವಾಜ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾನುವಾರ ಸರ್ವಜ್ಞ ಉದ್ಯಾನವನ ಭೇಟಿ ನೀಡಿ ಗಿಡ ನೆಟ್ಟರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande