ಉತ್ತರಾಖಂಡದಲ್ಲಿ ಭಾರಿ ಮಳೆ : ಸಂಚಾರ ವ್ಯವಸ್ಥೆ ಅಸ್ತವ್ಯಸ್ತ
ಡೆಹ್ರಾಡೂನ್, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾರಿ ಮಳೆಯಿಂದಾಗಿ ಉತ್ತರಾಖಂಡದ ಚಮೋಲಿಯ ಗಡಿ ಪ್ರದೇಶವನ್ನು ಸಂಪರ್ಕಿಸುವ ಜ್ಯೋತಿರ್ಮಠ-ಮಲಾರಿ ರಸ್ತೆಯ ತಮಕ್ ನಲಾ ಸೇತುವೆ ಕೊಚ್ಚಿಹೋಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆ ಗಡಿಯ ಸೈನಿಕರ ಸಂಚಾರಕ್ಕೆ ಪ್ರಮುಖವಾದದ್ದು. ಚಾರ್‌ಧಾಮ್ ಮ
Rain


ಡೆಹ್ರಾಡೂನ್, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾರಿ ಮಳೆಯಿಂದಾಗಿ ಉತ್ತರಾಖಂಡದ ಚಮೋಲಿಯ ಗಡಿ ಪ್ರದೇಶವನ್ನು ಸಂಪರ್ಕಿಸುವ ಜ್ಯೋತಿರ್ಮಠ-ಮಲಾರಿ ರಸ್ತೆಯ ತಮಕ್ ನಲಾ ಸೇತುವೆ ಕೊಚ್ಚಿಹೋಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆ ಗಡಿಯ ಸೈನಿಕರ ಸಂಚಾರಕ್ಕೆ ಪ್ರಮುಖವಾದದ್ದು.

ಚಾರ್‌ಧಾಮ್ ಮಾರ್ಗಗಳು ಇನ್ನೂ ಮುಚ್ಚಲ್ಪಟ್ಟಿವೆ.

ಉತ್ತರಕಾಶಿ-ಗಂಗೋತ್ರಿ ಹಾಗೂ ಯಮುನೋತ್ರಿ ಹೆದ್ದಾರಿಗಳಲ್ಲಿ ಬಂಡೆ ಹಾಗೂ ಮಣ್ಣು ಕುಸಿತದಿಂದ ಸಂಚಾರ ಸ್ಥಗಿತವಾಗಿದೆ. ಕುಮಾವೂನ್ ಭಾಗದ ಹಲ್ದ್ವಾನಿ-ಸಿತಾರ್‌ಗಂಜ್ ರಾಜ್ಯ ಹೆದ್ದಾರಿ ನೀರಿನ ಹರಿವಿನಿಂದ ತಡೆಗಟ್ಟಲಾಗಿದೆ.

ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಬಾಗೇಶ್ವರ, ಪಿಥೋರಗಢ, ಚಂಪಾವತ್ ಮತ್ತು ಉಧಮ್ ಸಿಂಗ್ ನಗರಗಳಿಗೆ ಹವಾಮಾನ ಇಲಾಖೆ ಕಿತ್ತಳೆ ಎಚ್ಚರಿಕೆ ನೀಡಲಾಗಿದ್ದು, ಅಲಕನಂದಾ, ಗಂಗಾ, ಯಮುನಾ, ಸರಯು, ಗೋಮತಿ, ಪಿಂಡಾರ್, ಕಾಳಿ ನದಿಗಳ ದಡದ ಜನರಿಗೆ ನದಿ ಬಳಿ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande