ಕಳ್ಳಭಟ್ಟಿ ಸಾರಾಯಿ, ಅಕ್ರಮ ಸೇಂದಿ ಸಂಗ್ರಹ, ಮಾರಾಟ ತಡೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೂಚನೆ
ಕಲಬುರಗಿ, 05 ಜೂನ್ (ಹಿ.ಸ.) : ಆ್ಯಂಕರ್ : ಸಾರಾಯಿ ಮತ್ತು ನಕಲಿ ಮದ್ಯ,ಅಕ್ರಮ ಸೇಂದಿ ಸಂಗ್ರಹ ಮತ್ತು ಮಾರಾಟವನ್ನು ತಡೆಗಟ್ಟಲು ಪ್ರತಿಯೊಬ್ಬ ಅಧಿಕಾರಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿ ಸೂಚನೆ ನೀಡಿದರು. ಜಿಲ್ಲಾಧಿಕಾರಗಳ ಸಭಾಂಗಣ
ಕಳ್ಳಭಟ್ಟಿ ಸಾರಾಯಿ ಮತ್ತು ಅಕ್ರಮ ಸೇಂದಿ ಸಂಗ್ರಹ ಮಾರಾಟ  ತಡೆಗಟ್ಟಲು ಜಿಲ್ಲಾಧಿಕಾರಿ ಬಿ. ಫೌಜಿಯಾ:ತರನ್ನುಮ್ ಅವರು ಅಧಿಕಾರಿಗಳಿಗೆ  ಸೂಚನೆ


ಕಲಬುರಗಿ, 05 ಜೂನ್ (ಹಿ.ಸ.) :

ಆ್ಯಂಕರ್ : ಸಾರಾಯಿ ಮತ್ತು ನಕಲಿ ಮದ್ಯ,ಅಕ್ರಮ ಸೇಂದಿ ಸಂಗ್ರಹ ಮತ್ತು ಮಾರಾಟವನ್ನು ತಡೆಗಟ್ಟಲು ಪ್ರತಿಯೊಬ್ಬ ಅಧಿಕಾರಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿ ಸೂಚನೆ ನೀಡಿದರು.

ಜಿಲ್ಲಾಧಿಕಾರಗಳ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಕಲಬೆರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರಚಿಸಲಾದ ಸ್ಥಾಯಿ ಸಮಿತಿ ಸಭೆ ನಡೆಸುವ ಕುರಿತು. ಸಭೆಯನ್ನು ಉದ್ದೇಶಿ ಮಾತನಾಡಿದರು. ಇಂತಹ ಅಕ್ರಮ ಮಾರಾಟದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಸ್ವಾಸ್ಥ್ಯ ಮತ್ತು ಶಾಂತಿಯುತವಾದ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ವಿಶೇಷವಾಗಿ ತಾಂಡಗಳು ಮತ್ತು ಸ್ಲಂ ಏರಿಯಾಗಳು ಕೆಲವೊಂದು ಸಣ್ಣಪುಟ್ಟ ಪ್ರದೇಶಗಳಲ್ಲಿ ಹಣವನ್ನುಗಳಿಸುವ ದುರಾಸೆಗೆ ಒಳಗಾಗಿ ಅಕ್ರಮವಾಗಿ ನಕಲಿ ಮದ್ಯ ಮಾರಾಟ, ಅಕ್ರಮಸೇಂದಿ ಮಾರಾಟ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧವಾಗಿ ಅಬಕಾರಿ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಾಗ ಮಾತ್ರ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದರು.

ಅಬಕಾರಿ ಇಲಾಖೆ ವತಿಯಿಂದ ದಾಖಲಾದ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಸಂಗಣ್ಣ ಗೌಡ ಹೊಸಳ್ಳಿ ಇವರು ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಕಳ್ಳಭಟ್ಟಿ ಹಾಗೂ ಅಕ್ರಮ ಸೇಂದಿ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಯವರಿಗೆ ಮಾಹಿತಿಯನ್ನು ನೀಡಿದರು.

ಕಳ್ಳಭಟ್ಟಿ ಸಾರಯಿಯಲ್ಲಿ ದಾಖಲಾದ ಪ್ರಕರಣಗಳ ವಿವರ

2022-23 ರಲ್ಲಿ ಕಳ್ಳಭಟ್ಟಿ ಸರಾಯಿಲ್ಲಿ 43 ಪ್ರಕರಣಗನ್ನು ದಾಖಲಿಸಿ 206 ಲೀ ಕಳ್ಳಭಟ್ಟಿ ಸಾರಾಯಿಯ ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು.2023-24 ರಲ್ಲಿ 25 ಪ್ರಕರಣಗಳನ್ನು ದಾಖಲಿಸಿ 108 ಲೀ 2024-25 ರಲ್ಲಿ 19 ಪ್ರಕರಣಗಳನ್ನು ದಾಖಲಿಸಿ 83 ಲೀ ಜಪ್ತಿ ಮತ್ತು ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು.

ಅಕ್ರಮಸೇಂದಿ ಕುರಿತು ದಾಖಲಾದ ಪ್ರಕರಣಗಳ ವಿವರ

2022-23 ರಲ್ಲಿ 66 ಪ್ರಕರಣಗಳನ್ನು ದಾಖಲಿಸಿ 2428 ಲೀಟರ್ ಅಕ್ರಮ ಸೇಂದಿಯ ಮುದ್ದೆಮಾಲನ್ನು ಜಪ್ತಿಮಾಡಲಾಯಿತು, 2023-24 ರಲ್ಲಿ 57 ಪ್ರಕರಣಗಳನ್ನು ದಾಖಲಿಸಿ 2513 ಲೀಟರ್, 2024-25 ರಲ್ಲಿ 29 ಪ್ರಕರಣಗಳ್ನು ದಾಖಲಿಸಿ 1413 ಲೀಟರ್ ಜಪ್ತಿ ಮತ್ತು ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು ಅಬಕಾರಿ ಅಧೀಕ್ಷಕರು ರವೀಂದ್ರ ಪಾಟೀಲ ಸಂಪೂರ್ಣವಾದ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರಿಗೆ ನೀಡಿದರು.

ಆರ್ಥಿಕವಾಗಿ ದುರ್ಬಲರಾದವರು ನಿರುದ್ಯೋಗಿ ಯುವಕರು ಹಣವನ್ನು ಸಂಪಾದನೆಯನ್ನು ಮಾಡುವ ಸುಲಭ ಮಾರ್ಗವಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಂಡಾ ಪ್ರದೇಶಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತು ವಿಶೇಷವಾಗಿ ಸೇಡಂ, ಚಿಂಚೋಳಿ, ಚಿತ್ತಾಪೂರ, ಶಹಾಬಾದ ಕೆಲವೊಂದು ಗಡಿಪ್ರದೇಶಗಳಲ್ಲಿ ಚೆಕ್‍ಪೊಸ್ಟ್‍ಗಳಲ್ಲಿ ನಿಗಾವಹಿಸಿ ಇಂತಹ ಅಕ್ರಮ ಸಾಗಾಟ ತಡೆಗಟ್ಟಬೇಕು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು,ಗ್ರಾಮೀಣ ಪ್ರದೇಶಗಳಿಗೆ ಸಾರ್ವಜನಿಕರಿಗೆ. ರೈತರಿಗೆ ಇಂತಹ ಅಕ್ರಮ ಸಾಗಟದಿಂದಾಗುವ ದುಷ್ಪರಿಣಾಮಗಳು ಮತ್ತು ಕಾನೂನು ಕ್ರಮಗಳ ಕುರಿತು ಜಾಗೃತಿಯನ್ನು ಮೂಡಿಸಬೇಕೆಂದು ತಿಳಿಸಿದರು.

ಅಬಕಾರಿ ಇಲಾಖೆಯ ಬೆಳಗಾವಿ ಕೇಂದ್ರಸ್ಥಾನದ ಜಾರಿ ಮತ್ತು ಅಪರಾಧ ವಿಭಾಗದ ಅಪರ ಆಯುಕ್ತರಾದ ಡಾ. ಮಂಜುನಾಥ ಅವರು ಮಾತನಾಡಿ, ಕಳಭಟ್ಟಿ ಕಲಬೆರಿಕೆ ಸೇಂದಿ ಮಾರಾಟದೊಂದಿಗೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿದ್ದು, ಇದರಿಂದ ಸಾರ್ವಜನಿಕರು ಮತ್ತು ಯುವಜನಾಂಗದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಎಂದರು.

ಕಲಬೆರಿಕೆ ಸೇಂಧಿಯನ್ನು ಸೇವಿಸಿದ್ದಾರೆ ಕ್ರಮೇಣವಾಗಿ ಪ್ರಮುಖ ಅಂಗಗಳಾದ ಲೀವರ್ ಕಿಡ್ನಿ ನಿಷ್ಕ್ರೀಯಗೊಂಡು ರೋಗಿಗಳು ಸಾವನ್ನಪ್ಪುವ ಸಂಭವಿರುತ್ತದೆ. ಇಂತಹ ಅಕ್ರಮಗಳನ್ನು ತಡಗಟ್ಟಲು ನಾವು ಗಡಿ ಪ್ರದೇಶದಿಂದ ಬರುವಂತಹ ವಾಹನಗಳನ್ನು ತಪಾಸಣೆ ಮಾಡಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೋಲಿಸ್ ಇಲಾಖೆ ಮಾಹಿತಿ ನೀಡಿದ್ದಾಗ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಗಳಿಗೆ ಭೇಟಿ ನೀಡಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ್ದವರ ಮೇಲೆ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ವೇದಿಕೆ ಮೇಲೆ ಡಿಸಿಪಿ ಕನಿಕಾ ಸಿಕ್ರಿವಾಲ, ಅಬಕಾರಿ ಅಧೀಕ್ಷರಾದ ಎಚ್.ಎಸ್. ವಜ್ರಮಟ್ಟಿ, ಅಬಕಾರಿ ಉಪ ಅಧೀಕ್ಷಕರಾದ ರವೀಂದ್ರ ಪಾಟೀಲ, ಅಬಕಾರಿ ಅಧೀಕ್ಷಕ ರಾಮನ ಗೌಡ, ಶಹಾಬಾದ ಡಿವೈಎಸ್‍ಪಿ ಶಂಕರ ಗೌಡ ಪಾಟೀಲ, ಚಿಂಚೋಳಿ ಡಿವೈಎಸ್‍ಪಿ ಹಿರೇಮಠ, ಎಲ್ಲ ತಾಲೂಗಳ ವಲಯ ಅಬಕಾರಿ ನಿರೀಕ್ಷಕರು ಹಾಜರಿದ್ದರು .

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande