ಪ್ರತಿಭೆ ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಸಹಕಾರಿ : ಟ್ರೆಂಡಿ ಪೇಪರ್ ಮಾಲೀಕ ಸುನಿಲ್ ಗುಂಡೆ
ಬಳ್ಳಾರಿ, 29 ಜೂನ್ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳು ಮತ್ತು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಬಹಳ ಸಹಕಾರಿ ಆಗಲಿವೆ ಎಂದು ಟ್ರೆಂಡಿ ಪೇಪರ್ ಮಾಲೀಕ ಸುನಿಲ್ ಗುಂಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿ ನಗರ ವಾಟರ್ ಬೂಸ್ಟ್ ಹತ್ತಿರದ ಟ್ರೆಂಡಿ ಪೇಪರ್
ಪ್ರತಿಭೆ ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಸಹಕಾರಿಯಾಗಲಿವೆ :  ಟ್ರೆಂಡಿ ಪೇಪರ್  ಮಾಲೀಕ ಸುನಿಲ್ ಗುಂಡೆ


ಬಳ್ಳಾರಿ, 29 ಜೂನ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳು ಮತ್ತು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಚೆಸ್ ಸ್ಪರ್ಧೆಗಳು ಬಹಳ ಸಹಕಾರಿ ಆಗಲಿವೆ ಎಂದು ಟ್ರೆಂಡಿ ಪೇಪರ್ ಮಾಲೀಕ ಸುನಿಲ್ ಗುಂಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿ ನಗರ ವಾಟರ್ ಬೂಸ್ಟ್ ಹತ್ತಿರದ ಟ್ರೆಂಡಿ ಪೇಪರ್ ಕಾಂಪ್ಲೆಕ್ಸ್‍ನಲ್ಲಿ ಬಳ್ಳಾರಿ ಚೆಸ್ ಅಕಾಡೆಮಿ ಮತ್ತು ಟ್ರೆಂಡಿ ಪೇಪರ್ ಆಶ್ರಯದಲ್ಲಿ 15 ವರ್ಷದ ಮಕ್ಕಳಿಗಾಗಿ ರಾಜ್ಯಮಟ್ಟದ ಚೆಸ್ ಚಾಂಪಿಯನ್‍ಶಿಪ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ವಿದ್ಯಾರ್ಥಿಗಳಿಗಾಗಿ ಚೆಸ್ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಇದು ಎರಡನೇ ಬಾರಿ ಎಂದು ಅವರು ಹೇಳಿದರು.

ಈ ಬಾರಿ ಚೆಸ್ ಸ್ಪರ್ಧೆಗಳಲ್ಲಿ ಒಟ್ಟು 135 ಮಕ್ಕಳು ಭಾಗವಹಿಸಿದ್ದು ಬಳ್ಳಾರಿ, ಜೆಎಸ್‍ಡಬ್ಲ್ಯೂ, ಹೊಸಪೇಟೆ, ಬೆಂಗಳೂರು, ಬೀದರ್, ಉಡುಪಿ, ಕುಂದಾಪುರ, ಹೈದರಾಬಾದ್, ಆಂಧ್ರಪ್ರದೇಶ, ಅನಂತಪುರ, ಗುಂಟಕಲ್‍ನ ವಿದ್ಯಾರ್ಥಿಗಳು ಮತ್ತು ಯುಎಸ್‍ಎಯ ಇಶಾನ್ ಎಂಬ ವಿದ್ಯಾರ್ಥಿ ಕೂಡ ಈ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚೆಸ್ ಪಂದ್ಯಾವಳಿಯಲ್ಲಿ ಪ್ರತಿಭೆ ತೋರಿಸಿದ ಮಕ್ಕಳಿಗೆ ನಗದು ಬಹುಮಾನಗಳು ಮತ್ತು ಮೊಹರು ಮಾಡಿದ ಪ್ರಮಾಣಪತ್ರಗಳನ್ನು ಸಹ ನೀಡಲಾಯಿತು.

ಈ ಸಂದರ್ಭದಲ್ಲಿ, ಬಳ್ಳಾರಿ ಚೆಸ್ ಅಕಾಡೆಮಿ ತರಬೇತುದಾರ ಎಸ್.ಎಂ.ಡಿ. ರಫೀಕ್,ಬಸವೇಶ್ವರ ಮೆಡಿಕಲ್ ಸೆಂಟರ್ ಆರ್ಥೋಪೆಟಿಕ್ ಡಾಕ್ಟರ್ ಭರತ್, ಬಳ್ಳಾರಿ ಚೆಸ್ ಅಸೋಸಿಯೇಟೆಡ್ ಅಧ್ಯಕ್ಷ ವಿರೂಪಾಕ್ಷಯ್ಯ, ಕಾರ್ಯದರ್ಶಿ ನಾಗರಾಜ್, ಚೈತನ್ಯ ಕಾಲೇಜು ಪ್ರಾಂಶುಪಾಲ ರಾಘವೇಂದ್ರ ಸೆಂಥಿಲ್, ಡಿ.ಎಂ. ಶಿವಕುಮಾರ್, ಡಾ.ವಿ.ಜೆ. ಭರತ್ ಮತ್ತು ಇತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande