ಉತ್ತರಕಾಶಿ, 24 ಜೂನ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಯಮುನೋತ್ರಿ ಮಾರ್ಗದ ಕೈಂಚಿ ಭೈರವ ದೇಗುಲದ ಬಳಿ ಸಂಭವಿಸಿದ ಭೂ ಕುಸಿತದಲ್ಲಿ ಕಣ್ಮರೆಯಾದ ಐವರು ಯಾತ್ರಾರ್ಥಿಗಳಲ್ಲಿ ಇಬ್ಬರು ಸಾವಿಗೀಡಾಗಿದ್ದು, ಉಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಸೋಮವಾರ ರಾತ್ರಿ ವರೆಗೆ ನಡೆದ ಶೋಧ ಕಾರ್ಯದಲ್ಲಿ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಮೃತರು ಉತ್ತರ ಪ್ರದೇಶದ ಜೌನ್ಪುರ್ನ ಹರಿಶಂಕರ್ (47) ಮತ್ತು ಅವರ 8 ವರ್ಷದ ಮಗಳು ಖ್ಯಾತಿ ಎಂಬುದು ದೃಢಪಟ್ಟಿದೆ. ಈ ಭೂ ಕುಸಿತದಲ್ಲಿ ದೆಹಲಿಯ ಭಾವಿಕ ಶರ್ಮಾ ಹಾಗೂ ಮುಂಬೈನ ಕಮಲೇಶ್ ಜೆತ್ವಾ ಇನ್ನೂ ಕಾಣೆಯಾಗಿದ್ದು, ಒರ್ವನನ್ನು ರಕ್ಷಿಸಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa