ಕಲಬುರಗಿ, 11 ಜೂನ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿಗಳ, ಉಪ ಮುಖ್ಯಮಂತ್ರಿಗಳ ಹೈಕಮಾಂಡ್ ಭೇಟಿ ವಿಚಾರದ ಕುರಿತು ಎಐಸಿಸಿ ಅಧ್ಯಕ್ಣ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ವಿಷಯಗಳನ್ನ ಚರ್ಚೆ ಮಾಡಿದೆವು. ಕಾಲ್ತುಳಿತ, ಜನಗಣತಿ ಬಗ್ಗೆ ಚರ್ಚೆ ಮಾಡಿದೆವು. ನಾವು, ರಾಹುಲ್ ಗಾಂಧಿ ಮಾಹಿತಿ ಪಡೆದು ಸೂಕ್ಷ್ಮವಾಗಿ ತಿಳಿಸಿದೆವು. ಇಂತಹ ಘಟನೆ ನಡೆಯಬಾರದಾಗಿತ್ತು, ಆ ಕುಟುಂಬದವರು ಬೆನ್ನಿಗೆ ನಿಲ್ಲಬೇಕು ಎಂದರು.
ಬಿಜೆಪಿಯಿಂದ ಮುಖ್ಯಮಂತ್ರಿಗಳ, ಉಪ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯದ ಕುರಿತು ಮಾತನಾಡಿದರು. ಕುಂಭ ಮೇಳದಲ್ಲಿ ರಾಜೀನಾಮೆ ಕೊಟ್ಟರಾ? ನನಗೆ ಬೈದ್ರು. ಆವಾಗ , ಒಂದೊಂದೆ ಹೆಣ ತೇಲಿದವು, ಯೋಗಿ ರಾಜಿನಾಮೆ ಕೊಡಬೇಕಾಗಿತ್ತು. ಉದ್ದೇಶಪೂರ್ವಕವಾಗಿ ಆಗಿರೋದು ಅಲ್ಲ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆ ನಮ್ಮವರು ಕ್ಷಮೆ ಕೂಡ ಕೇಳಿದ್ದಾರೆ. ಈ ರೀತಿಯಾಗಿ ಆಗಬಾರದು ನಮಗೂ ನೋವಿದೆ ಎಂದರು.
ಇಡಿ ದಾಳಿ ವಿಚಾರ
ನನಗೆ ವಿವರ ಗೊತ್ತಿಲ್ಲ , ಇಡಿ ಅವರಿಗೆ ಕಾಂಗ್ರೆಸ್ ಪಾರ್ಟಿ ಮೇಲೆ ಸಿಟ್ಟಿದೆ. ಕಾಂಗ್ರೆಸ್ ಎಮ್ ಎಲ್ ಎ ಮೇಲೆ ದಾಳಿ ಆಗುತ್ತೆ ಅಂದ್ರೆ. ನಮ್ಮ ಪಕ್ಷ ಒಡೆಯುವ ಕೆಲಸ ಮಾಡುತಿದ್ದಾರೆ. ಎಲೆಕ್ಷನ್ ನಲ್ಲಿ ಆಗಿರುವ ವಿಚಾರ ಇವಾಗ ತೊಂದ್ರೆ ಕೊಡ್ತಿರೋದು ಸರಿಯಲ್ಲ. ಇಲ್ಲಿರುವ ಶಾಸಕರು ಡಿವೈಡ್ ಮಾಡಬೇಕು ಎಂದು ಪ್ರಯತ್ನ ನಡೆದಿದೆ. ಇಡಿ ಅವರು ಯಾವ ರೀತಿಯಾಗಿ ಕೇಸ್ ಮಾಡ್ತಾರೋ ನೋಡೊಣ. ನಿಗಮದ ಹಣ ದುರ್ಬಳಕೆ ಆಗಿರೋದು ಇಡಿಗೆ ಬಿಟ್ಟಿರುವ ವಿಚಾರದ ಕುರಿತು ತನಿಖೆ ಆಗುತ್ತೆ ಹೋಗುತ್ತೆ, ಚುನಾವಣೆ ಸಂಧರ್ಭದಲ್ಲಿ ಸಾವಿರಾರು ಕೋಟಿ ಸೀಜ್ ಮಾಡಿದ್ದಾರೆ. ಆ ಹಣ ಎಲ್ಲಿದೆ ಏನಾಗಿದೆ ಎಂದು ಇದುವರೆಗೆ ಹೊರಗಡೆ ಬಂದಿಲ್ಲ. ಅವರು ಒಂದೇ ಪಾರ್ಟಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ. ಈ ಪಕ್ಷಕ್ಕೆ ತೊಂದ್ರೆ ಕೊಟ್ಟರೆ ಭೇಧ ಭಾವ ಉಂಟಾಗಿ ನಮಗೆ ಅನುಕೂಲ ಆಗುತ್ತೆ ಎಂದು ಯೋಜನೆ. ಆದ್ರೆ ನಮ್ಮ ಎಮ್ ಎಲ್ ಎ ಗಳು ಎಲ್ಲಾ ಒಗ್ಗಾಟ್ಟಾಗಿದ್ದಾರೆ. ಆದ್ರೆ ಕರ್ನಾಟಕದದಲ್ಲಿ ಇದು ವರ್ಕೌಟ್ ಆಗೋದಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Samarth biral