ಬಳ್ಳಾರಿ, 31 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಮುಖಂಡ ಬಿ. ರಾಂಪ್ರಸಾದ್ ಅವರ ಹಿರಿಯ ಮಗ ಅರವ್ ಸೂರ್ಯ (ನಿಕಿಲ್) ನಾಯಕನಟನಾಗಿ ನಟಿಸಿರುವ `ಕಾಲೇಜ್ ಕಲಾವಿದ' ಕನ್ನಡ ಚಿತ್ರ ಜೂನ್ 6 ರಂದು ನಗರದ ಉಮಾ ಚಿತ್ರಮಂದಿರ ಸೇರಿ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ.
ಚಿತ್ರ ನಿರ್ದೇಶಕ ಸಂಜಯ್ ಮಳವಳ್ಳಿ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿ, ವಿಭಿನ್ನ ಪ್ರೇಮಕಥೆಯ `ಕಾಲೇಜು ಕಲಾವಿದ' ಕೌಟುಂಬಿಕ ಚಿತ್ರವಾಗಿದೆ. ಕುಟುಂಬದ ಎಲ್ಲಾ ಸದಸ್ಯರನ್ನೂ ಕನೆಕ್ಟ್ ಮಾಡುವ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ನಾಯಕನಟ ಅರವ್ ಸೂರ್ಯ ಅವರು, ನಾನು ಬಳ್ಳಾರಿಯ ಹುಡುಗ. ಈಗಾಗಲೇ ಎರಡು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿದ್ದೇನೆ. ಧಾರವಾಹಿಗಳಲ್ಲಿ ನಟಿಸಿ, ಈಗ `ಕಾಲೇಜು ಕಲಾವಿದ'ನಲ್ಲಿ ನಾಯಕನಟನಾಗಿದ್ದೇನೆ. ವಿಭಿನ್ನವಾದ ಪ್ರೇಮಕಥೆ. ವೈಶಿಷ್ಟತೆಯ ಹಾಡುಗಳು. ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅತ್ಯುತ್ತಮವಾದ ಕಥೆ, ಆಕರ್ಷಕ ನಿರ್ದೇಶಕವನ್ನು ಹೊಂದಿದೆ. ಪ್ರೇಕ್ಷಕರು ಥಿಯೇಟರ್ಗಳಲ್ಲಿ ಸಿನಿಮಾ ನೋಡಿ, ಸಿನಿಮಾವನ್ನು ಯಶಸ್ವಿಗೊಳಿಸುವುದರ ಜೊತೆಯಲ್ಲಿ ಕಲೆ - ಕಲಾವಿದರನ್ನೂ, ನಿಮ್ಮೂರಿನ ನನ್ನನ್ನೂ ಆಶೀರ್ವದಿಸಬೇಕು ಎಂದು ಕೋರಿದರು.
ಯುವ ನಾಯಕಿ ಚೈತ್ರ ಲೋಕನಾಥ್ ಅವರು ಚಿತ್ರದ ನಾಯಕನಟಿಯಾಗಿದ್ದಾರೆ. ತಾರಾ ಬಳಗದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್, ಹರಣಿ, ಶ್ರೀಕಾಂತ್ ಹಾಗೂ ರಮೇಶ್ ಭಟ್, ಶೈಲಪುತ್ರಿ, ಪೆÇೀಷಕ ಪಾತ್ರಗಳಲ್ಲಿ ಮತ್ತು ನಿಖಿಲ್, ನಂದಿನಿ, ದಿನೇಶ್ ಕುಲಕರ್ಣಿ, ನವೀನ್, ನಿರಂತ್ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಗಜಾನನ ಫಿಲ್ಸ್ಂ ಬ್ಯಾನರ್ ಅಡಿಯಲ್ಲಿ ತರುಣ್ ಶರ್ಮ ಅವರು ನಿರ್ಮಾಣ ಮಾಡಿದ್ದಾರೆ. ಸೂರಜ್ ಸಂಗೀತ, ಗಂಗಾವತಿ ಮಹೇಶ್ ಸಂಕಲನ ಮತ್ತು ಆನಂದ್ ಸುರೇಶ್ ಛಾಯಾಗ್ರಹಣ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.
ಯುವ ನಾಯಕಿ ಚೈತ್ರ ಲೋಕನಾಥ್, ಗಜಾನನ ಫಿಲ್ಸ್ಂನ ತರುಣ್ ಶರ್ಮ ಹಾಗೂ ಮುಖಂಡ ಬಿ. ರಾಂಪ್ರಸಾದ್ ವೇದಿಕೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್