ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ
ಬಳ್ಳಾರಿ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಂತಾರಾಷ್ಟ್ರೀಯ ಪರ್ವತ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ನೋಪಾಸನಾ ಸಂಸ್ಥೆ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮತ್ತು ರೇಂಜರ್ ತಂಡಕ್ಕೆ ಜಂಟಿಯಾಗಿ ಸಂಡೂರು ಪಟ್ಟಣದ ಯಶವಂತನಗರದ ಅರಣ್ಯ ಪ್ರ
ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿಯ ವಿದ್ಯಾರ್ಥಿಗಳಿಗೆ ಸಂಡೂರು ಸಮೀಪದ ಯಶವಂತನಗರದಲ್ಲಿ ಚಾರಣ


ಬಳ್ಳಾರಿ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಂತಾರಾಷ್ಟ್ರೀಯ ಪರ್ವತ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ನೋಪಾಸನಾ ಸಂಸ್ಥೆ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮತ್ತು ರೇಂಜರ್ ತಂಡಕ್ಕೆ ಜಂಟಿಯಾಗಿ ಸಂಡೂರು ಪಟ್ಟಣದ ಯಶವಂತನಗರದ ಅರಣ್ಯ ಪ್ರದೇಶದಲ್ಲಿ ಏರ್ಪಡಿಸಿದ್ದ ಚಾರಣದಲ್ಲಿ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ನೋಪಾಸನಾ ಸಂಸ್ಥೆಯ ಎಂ.ಎ. ಷಕೀಬ್ ಅವರು, ವಿದ್ಯಾರ್ಥಿಗಳಿಗೆ ಚಾರಣ, ರಾಕ್ ಕ್ಲೈಂಬಿಂಗ್, ಲ್ಯಾಡರ್ ಕ್ಲೈಂಬಿಂಗ್, ಪರಿಸರ ಸಂರಕ್ಷಣೆ ಮತ್ತು ರೋಪ್ ಬಳಕೆ - ಔಷಧಿ ಸಸಿಗಳ ಕುರಿತು ; ಬರ್ಡ್‍ವಾಚಿಂಗ್, ಇನ್ನಿತರೆಗಳ ಕುರಿತು ವಿವರಿಸಿ - ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನವನ್ನು ನೀಡಿದರು.

ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಪ್ರಹ್ಲಾದ್ ಚೌಧರಿ, ಸ್ಕೌಟ್ ಲೀಡರ್‍ಗಳಾದ ಎನ್. ಗಣತೆಪ್ಪ ಶೇಟ್ಟಿ, ಡಾ. ಗುರುಬಸಪ್ಪ ಎಸ್ ಹಾಗೂ ನೋಪಾಸನಾ ತಂಡದ ಮಲ್ಲಿಕಾರ್ಜುನ, ವೀರೇಶ್, ಪರಮೇಶ್ ಮತ್ತು ಮೇರಿ ಅವರು ತರಬೇತಿ ನೀಡಿದರು.

ವಿದ್ಯಾರ್ಥಿಗಳು, ನಾವೆಲ್ಲರೂ ಚಾರಣದ ಕುರಿತು ತಿಳಿಯಲು ಬಂದಿದ್ದೆವು. ಆದರೆ, ನಾವಿಲ್ಲಿ ಪರಿಸರ ಸಂರಕ್ಷಣೆ, ಪಕ್ಷಿ ವೀಕ್ಷಣೆ, ವಿಭಿನ್ನವಾದ ಔಷಧೀಯ ಸಸಿಗಳು - ಸಾಹಸಗಳ ಕುರಿತು ಸಾಕಷ್ಟು ಮಾಹಿತಿ ಪಡೆದೆವು. ಎಂ.ಎ. ಷಕೀಬ್ ಮತ್ತು ಅವರ ತಂಡವು, ಪ್ರತಿ ವಿದ್ಯಾರ್ಥಿಗೂ ಸಾಹಸಗಳು ಮತ್ತು ಚಾರಣ ಇನ್ನಿತರೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಸಾಕಷ್ಟು ವಿಶೇಷಗಳನ್ನು ತಿಳಿದುಕೊಂಡ ಖುಷಿಯಾಗಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande