ರಾಯಚೂರು, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 20 ಜನ ಶಾಸಕರು ಇರುವ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಅಕ್ಟೋಬರ್ 10ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದೆ.
ವಿಧಾನಸಭಾ ಸದಸ್ಯರು ಆಗಿರುವ ಹಾಗೂ ಸಮಿತಿಯ ಅಧ್ಯಕ್ಷರಾದ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದ ಸಮಿತಿಯು ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯಲ್ಲಿನ ಎಲ್ಲಾ ಯೋಜನೆಗಳ/ ಕಾರ್ಯಕ್ರಮಗಳು ಅನುμÁ್ಠನಗೊಂಡಿರುವ/ ಅನುμÁ್ಠನಗೊಳ್ಳುತ್ತಿರುವ ಬಗ್ಗೆ ಹಾಗೂ ಇಲಾಖೆಗೆ ಸಂಬಂಧಪಟ್ಟಂತೆ ಇನ್ನೀತರ ವಿಷಯಗಳ ಕುರಿತು ಚರ್ಚಿಸಲಿದೆ.
ಮಧ್ಯಾಹ್ನ 1.30ಕ್ಕೆ ಭೋಜನ ವಿರಾಮ ಇರುತ್ತದೆ. ಸಂಜೆ 4 ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.
ವಿಧಾನಸಭಾ ಸದಸ್ಯರಾದ ಉಮಾನಾಥ್ ಎ. ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಉದಯ ಬಿ. ಗರುಡಾಚಾರ್, ಹೆಚ್.ಎ. ಇಕ್ಬಾಲ್ ಹುಸೇನ್, ಅಶೋಕ್ ಮಲ್ಲಪ್ಪ ಮನಗೂಳಿ, ಕೊತ್ತೂರು ಜಿ. ಮಂಜುನಾಥ, ನಯನ ಮೋಟಮ್ಮ, ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್, ಪ್ರದೀಪ್ ಈಶ್ವರ್, ಡಿ. ರವಿಶಂಕರ್, ಹೆಚ್.ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್), ಮಂಜುಳಾ ಅರವಿಂದ ಲಿಂಬಾವಳಿ, ಕರೆಮ್ಮ ನಾಯಕ, ಶರಣಗೌಡ ಕಂದಕೂರ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಚಂದ್ರಶೇಖರ ಬಸವರಾಜ ಪಾಟೀಲ, ಶಾಂತಾರಾಮ್ ಬುಡ್ನಸಿದ್ದಿ, ವೈ.ಎಂ. ಸತೀಶ್, ಶರಣಗೌಡ ಬಯ್ಯಪುರ, ಕೆ. ವಿವೇಕಾನಂದ ಅವರು ಸೇರಿದಂತೆ 20 ಜನ ಶಾಸಕರು ಸಮಿತಿಯಲ್ಲಿ ಸದಸ್ಯರಾಗಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್