ಸೇವಾ ನ್ಯೂನತೆ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು 
ಕೊಪ್ಪಳ, 15 ಜನವರಿ (ಹಿ.ಸ.) : ಆ್ಯಂಕರ್ : ಫಿರ್ಯಾದುದಾರರಿಗೆ ಎದುರುದಾರ ಮಣಪ್ಪುರಂ ಪೈನಾನ್ಸ್ ಲಿಮಿಟೆಡ್ ಕಾರಟಗಿ ಬ್ರಾಂಚ್ ವತಿಯಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ. ಗ್ರಾಹಕ ಫಿರ್ಯಾದು ಸಂಖ್ಯೆ: 38/2024 ರ
ಸೇವಾ ನ್ಯೂನತೆ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು 


ಕೊಪ್ಪಳ, 15 ಜನವರಿ (ಹಿ.ಸ.) :

ಆ್ಯಂಕರ್ : ಫಿರ್ಯಾದುದಾರರಿಗೆ ಎದುರುದಾರ ಮಣಪ್ಪುರಂ ಪೈನಾನ್ಸ್ ಲಿಮಿಟೆಡ್ ಕಾರಟಗಿ ಬ್ರಾಂಚ್ ವತಿಯಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 38/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುರಾರಿ ನಗರದ ವ್ಯಾಪಾರಿ ಸೈಯದ್ ಸುಭಾನಿ ಪಾಷ ತಂದೆ ಸೈಯದ್ ಅಬ್ದುಲ್ ಹಮೀದ್ ಇವರು ತಮ್ಮ ವ್ಯಾಪಾರದ ಅವಶ್ಯಕತೆಗಾಗಿ 4 ಹಂತಗಳಲ್ಲಿ 2020ರ ಜುಲೈ 16 ರಿಂದ 2020ರ ಜುಲೈ 30ರವರೆಗೆ ಒಟ್ಟು 393.800 ಗ್ರಾಂ ಬಂಗಾರದ ಆಭರಣಗಳನ್ನು ಎದುರುದಾರರಾದ ಮಣಪ್ಪುರಂ ಪೈನಾನ್ಸ್ ಲಿಮಿಟೆಡ್ ಕಾರಟಗಿ ಬ್ರಾಂಚ್, ತಾ:ಗಂಗಾವತಿ ಜಿಲ್ಲೆ: ಕೊಪ್ಪಳ ಇವರಲ್ಲಿ ಅಡವಿಟ್ಟು ಒಟ್ಟು 12,30,555 ರೂ.ಗಳನ್ನು ಸಾಲವಾಗಿ ಪಡೆದುಕೊಂಡಿರುತ್ತಾರೆ.

ದೂರುದಾರರಾದ ಸೈಯದ್ ಸುಭಾನಿ ಪಾಷ ರವರು ಅಸಲು ಮತ್ತು ಬಡ್ಡಿಯನ್ನು ಮಣಪ್ಪುರಂ ಗೋಲ್ಡ್ ಪೈನಾನ್ಸ್ ರವರು, ಹರಾಜು ಪ್ರಕ್ರಿಯೆ ಪೂರ್ವದಲ್ಲಿ ದೂರುದಾರರಿಗೆ ನೋಟಿಸ್ ಸಹ ನೀಡದೇ ನಿಯವiಬಾಹಿರವಾಗಿ ಹರಾಜು ಮಾಡಿ ಸೇವಾ ನ್ಯೂನತೆಯನ್ನು ಎಸಗಿರುತ್ತಾರೆ ಹಾಗೂ ದೂರುದಾರರು ಅಡವಿಟ್ಟ ಬಂಗಾರದ ಆಭರಣಗಳನ್ನು ಕಾನೂನಿನ ಪ್ರಕ್ರಿಯೆ ಪಾಲಿಸದೇ ನಿಯಮಬಾಹಿರವಾಗಿ ಹರಾಜು ಮುಖಾಂತರ ಮಾರಾಟ ಮಾಡಿ, ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿರುತ್ತಾರೆ. ದೂರುದಾರನು ವಕೀಲರ ಮೂಲಕ ನೋಟಿಸ್ ನೀಡಿದಾಗ್ಯೂ ಸಹ ಸ್ಪಂದಿಸದೇ ನಿರ್ಲಕ್ರ್ಷ ತೋರಿರುತ್ತಾರೆ. ದೂರುದಾರರು ಎದುರುದಾರರ ವರ್ತನೆಯಿಂದ ಬೇಸತ್ತು ಎದುರುದಾರರಾದ ಮಣಪ್ಪುರಂ ಪೈನಾನ್ಸ್ ಲಿಮಿಟಿಡ್ ರವರ ವಿರುದ್ದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

ಈ ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಬೇಕಾಗಿರುವುದರಿಂದ ಎದುರುದಾರ ಮಣಪ್ಪುರಂ ಪೈನಾನ್ಸ್ ಲಿಮಿಟೆಡ್‍ರವರು ದೂರುದಾರರು ಅಡವಿಟ್ಟ ಬಂಗಾರದ ಆಭರಣಗಳನ್ನು ನಿಯವiಬಾಹಿರವಾಗಿ ಹರಾಜು ಮಾಡಿ ಸೇವಾ ನ್ಯೂನತೆ ಎಸಗಿರುವುದ್ದಕ್ಕಾಗಿ ಪರಿಹಾರವಾಗಿ 1,00,000 ರೂ.ಗಳಿಗೆ ವಾರ್ಷಿಕ ಶೇ.6ರ ಬಡ್ಡಿಯಂತೆ ದೂರುದಾರರಿಗೆ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ 10,000 ರೂ.ಗಳನ್ನು ಹಾಗೂ ದೂರಿನ ಖರ್ಚು 5000 ರೂ.ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande