ನವದೆಹಲಿ, 9 ಮೇ (ಹಿ.ಸ):ಆ್ಯಂಕರ್:ನವದೆಹಲಿಯಲ್ಲಿ ಇಂದಿನಿಂದ ಸಶಸ್ತ್ರ ಪಡೆಗಳ ಜಂಟಿ ಮತ್ತು ಏಕೀಕರಣದ ಕುರಿತ ಎರಡು ದಿನಗಳ ಸಮ್ಮೇಳನ- ’ಪರಿವರ್ತನ್ ಚಿಂತನ್-೨’ ಆರಂಭವಾಗಲಿದ್ದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಅನಿಲ್ ಚೌಹಾಣ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿವರ್ತನ್ ಚಿಂತನ್ನಲ್ಲಿ ಎಲ್ಲಾ ಮೂರು ರಕ್ಷಣಾ ವಿಭಾಗಗಳ ಮುಖ್ಯಸ್ಥರು ಭಾಗವಹಿಸಲಿದ್ದು, ರಕ್ಷಣಾ ಕ್ಷೇತ್ರದಲ್ಲಿ ನವೀನ ಸುಧಾರಣಾ ಕಲ್ಪನೆಗಳು ಮತ್ತು ಉಪಕ್ರಮಗಳನ್ನು ಕೈಗೊಳ್ಳುವ ಗುರಿಯನ್ನು ಹೊಂದಲಾಗಿದೆ. ಹಾಗೆಯೇ ವಿವಿಧ ವಿಭಾಗಗಳಲ್ಲಿ ಇದುವರೆಗೂ ಸಾಧಿಸಿದ ಪ್ರಗತಿಯನ್ನು ಸಹ ಸಮ್ಮೇಳನದಲ್ಲಿ ಪರಿಶೀಲಿಸಲಾಗುವುದು.
ಹಿಂದೂಸ್ತಾನ್ ಸಮಾಚಾರ್