ಸಮಾಜಕ್ಕಾಗಿ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ-ಆಕಾಶ್ ಆನಂದ್
ಲಕ್ನೋ, 9 ಮೇ (ಹಿ.ಸ):ಆ್ಯಂಕರ್:ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂ
Anand's First Reaction After Being


ಲಕ್ನೋ, 9 ಮೇ (ಹಿ.ಸ):ಆ್ಯಂಕರ್:ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ಉತ್ತರಾಧಿಕಾರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ಭೀಮ್ ಮಿಷನ್ ಮತ್ತು ಅವರ ಸಮಾಜಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಬಿಎಸ್ಪಿ ನಾಯಕಿ ಮತ್ತು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿರ್ಧಾರದ ನಂತರ ಆಕಾಶ್ ಆನಂದ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಯಾವತಿ, ನೀವು ಇಡೀ ಬಹುಜನ ಸಮುದಾಯಕ್ಕೆ ಮಾದರಿಯಾಗಿದ್ದೀರಿ, ಕೋಟಿಗಟ್ಟಲೆ ದೇಶವಾಸಿಗಳು ನಿಮ್ಮನ್ನು ಆರಾಧಿಸುತ್ತಾರೆ. ನಿಮ್ಮ ಹೋರಾಟಗಳಿಂದಾಗಿಯೇ ಇಂದು ನಮ್ಮ ಸಮಾಜಕ್ಕೆ ಇಷ್ಟೊಂದು ರಾಜಕೀಯ ಶಕ್ತಿ ಸಿಕ್ಕಿದ್ದು ಬಹುಜನ ಸಮಾಜ ಗೌರವದಿಂದ ಬದುಕಲು ಕಲಿತುಕೊಂಡಿದೆ ಎಂದು ಬರೆದಿದ್ದಾರೆ. ಭೀಮ್ ಮಿಷನ್ ಮತ್ತು ನನ್ನ ಸಮಾಜಕ್ಕಾಗಿ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದರು.

ಸೀತಾಪುರದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಮಾಯಾವತಿ ಆಕಾಶ್ ಆನಂದ್ ವಿರುದ್ಧ ಈ ರೀತಿಯ ಕ್ರಮ ಕೈಗೊಂಡಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಲಕ್ನೋದಲ್ಲಿ ನಡೆದ ಪದಾಧಿಕಾರಿಗಳ ಸಮ್ಮೇಳನದಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande