ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು
ಬೆಂಗಳೂರು, 06 ಮೇ (ಹಿ.ಸ): ಆ್ಯಂಕರ್ : ಸೋಮವಾರ, ಸಾಮಾಜಿಕ ಕಾಳಜಿಯುಳ್ಳ ನಾಗರಿಕರು ಹಾಗು ನಾಗರೀಕ ಸಂಸ್ಥೆಗಳ ತಂಡವೊಂದು
ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು


ಬೆಂಗಳೂರು, 06 ಮೇ (ಹಿ.ಸ):

ಆ್ಯಂಕರ್ : ಸೋಮವಾರ, ಸಾಮಾಜಿಕ ಕಾಳಜಿಯುಳ್ಳ ನಾಗರಿಕರು ಹಾಗು ನಾಗರೀಕ ಸಂಸ್ಥೆಗಳ ತಂಡವೊಂದು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರವರಿಗೆ ಭಾರತೀಯ ಜನತಾ ಪಕ್ಷ, ಕರ್ನಾಟಕದ ವಿರುದ್ಧ ದೂರು ಸಲ್ಲಿಸಿತು. ಬಿಜೆಪಿ ಕರ್ನಾಟಕ ತನ್ನ X handle ಹಾಗು ದಿನಪತ್ರಿಕೆಯಲ್ಲಿ ನೀಡಿದ ಜಾಹಿರಾತುಗಳ ಮೂಲಕ ಸುಳ್ಳು ಸುದ್ದಿ ಹಾಗು ದ್ವೇಷವನ್ನು ಹಬ್ಬಿಸುವ ಮೂಲಕ ಚುನಾವಣಾ ಕಾನೂನು, ಮಾದರಿ ನೀತಿ ಸಂಹಿತೆ, IPC 153(A(, 505(1)(C), 505(2) ಉಲ್ಲಂಘಿಸಿರಿವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿತು.

ಬಿಜೆಪಿ ಕರ್ನಾಟಕ , ತನ್ನ X handle ನಲ್ಲಿ ಹಾಕಿದ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ SC/ST ಹಾಗು OBC ಸಮುದಾಯಗಳ ಪಾಲಿನ ಫಂಡ್ಸ್ ಅನ್ನು ಮುಸ್ಲಿಂ ಸಮುದಾಯಕ್ಕೆ ಮಾತ್ರ ನೀಡಿ, ಈ ಸಮುದಾಯಗಳನ್ನು ಹೊರತಳ್ಳುವಂತೆ ಬಿಂಬಿಸಿದೆ. ಇಡೀ ವೀಡಿಯೊ ಮುಸ್ಲಿಂ ಸಮುದಾಯವನ್ನು ಕೆಟ್ಟದು ಹಗಲು ಇತರೆ ಸುಂದಾಯಗಳಿಗೆ ಹಾನಿ ಮಾಡುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ.

ಅದೇ ರೀತಿ ಪತ್ರಿಕಾ ಜಾಹೀರಾತಿನಲ್ಲಿ , ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡುವಂತೆ ಹಾಗು SC/ST ಹಾಗು OBC ಸಮುದಾಯಗಳ ಮೀಸಲಾತಿ ಕಿತ್ತುಹಾಕಲು ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಹೇಳಲಾಗಿದೆ. ಇದು ಸಹ ಸುಳ್ಳು ಸುದ್ದಿಯಾಗಿದೆ . ಸಂವಿಧಾನದ ಕಲಂ 15(4) ರ ಪ್ರಕಾರ , ಮೀಸಲಾತಿಯನ್ನು ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂತಿದೆ . ಇದರ ಪ್ರಕಾರ ಕರ್ನಾಟಕದಲ್ಲಿ ದೇವೆಗೌಡರ ಸರಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿತ್ತು. ಹಾಗು ಮುಸ್ಲಿಂ ಸಮುದಾಯಕ್ಕೆ ದೇಶದಲ್ಲೇ ಎಲ್ಲೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ ಹಾಗು ನೀಡುವದಾಗಿ ಕಾಂಗ್ರೆಸ್ ಪಕ್ಷ ಸಹ ಎಲ್ಲೂ ತಿಳಿಸಿಲ್ಲ .

ಮುಂದುವರೆದು , ದೂರಿನಲ್ಲಿ ಹೇಳಿದ್ದೇನೆಂದರೆ ಬಿಜೆಪಿ ಕರ್ನಾಟಕ , ಧರ್ಮವನ್ನು ಉಪಯೋಗಿಸಿ ಮತಗಳನ್ನು ಕೇಳಿ , Representation of People’s Act, 1951 ನ ಕಲಂ (3A) ಯನ್ನು ಉಲ್ಲಂಘನೆ ಮಾಡಿತು ; ಜೊತೆಗೆ ಮುಸ್ಲಿಂ ಸಮುದಾಯದ ಹಾಗು SC/ST ಹಾಗು OBC ಸಮುದಾಯಗಳ ಮಧ್ಯೆ ದ್ವೇಷವನ್ನು ಹಬ್ಬಿಸಲು ಹೊರಟಿದೆ ಎಂದು. Tweet ನಲ್ಲಿರುವ ವಿಡಿಯೋ ಹಾಗು ಜಾಹಿರಾತು ಮಾದರಿ ಚುನಾವಣೆ ನೀತಿ ಸಂಹಿತೆ ಹಾಗು ಚುನಾವಣೆ ಆಯೋಗ ನೀಡಿರುವ Advisory to political parties on plummeting level of public discourse during campaigning - https://ceo.karnataka.gov.in/uploads/media_to_upload1709706359.pdf ಅನ್ನು ಸಹ ಉಲ್ಲಂಘಿಸಿದೆ ಎಂದು ಸಹ ದೂರಲಾಗಿದೆ.

ಹಾಗಾಗಿ, ತಂಡವು, ಮುಖ್ಯ ಚುನಾವಣಾಧಿಕಾರಿಗಳು , ಭಾರತ ಸಂವಿಧಾನದ ಅನುಚ್ಛೇದ 324 ಅವರಿಗೆ ನೀಡಿರುವ ಅಧಿಕಾರವನ್ನು ಉಪಯೋಗಿಸಿ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿತು:

1) ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ಉಸ್ತುವಾರಿ; ನಡ್ಡಾ ರಾಷ್ಟ್ರೀಯ ಅಧ್ಯಕ್ಷ ಬಿಜೆಪಿ, ಅಮಿತ್ ಮಾಳವೀಯ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಬಿಜೆಪಿ ಮತ್ತು ವಿಜಯೇಂದ್ರ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರ ಇವರ ವಿರುದ್ಧ FIR ದಾಖಲಿಸುವಂತೆ ಆದೇಶಿಸಿ.

2)ಬಿಜೆಪಿ ಕರ್ನಾಟಕ - X handle ಎರಡು ದಿವಸ tweet ಮಾಡದ ಹಾಗೆ ಆದೇಶಿಸಿ

3)ಮೇಲೆ ನಮೂದಿಸಿದ tweet ಡಿಲಿಟ್ ಮಾಡಲು ಆದೇಶಿಸಿ

4)ಮೇಲೆ ನಮೂದಿಸಿರುವ ಜಾಹೀರಾತಿಗಾಗಿ ಬಿಜೆಪಿಯ star campaigner ನರೇಂದ್ರ ಮೋದಿ ಗೆ ನೋಟಿಸ್ ಜಾರಿ ಮಾಡಿ

5)ಬಿಜೆಪಿ ಕರ್ನಾಟಕ ಪ್ರಕಟಿಸಿದ ತಪ್ಪು ಜಾಹಿರಾತಿಗೆ , ಕ್ಷಮೆಯಾಚಿಸುವಂತೆ ಹಾಗು ಅದೇ ಸೈಜ್ ನ ಸ್ಪಷ್ಟಿಕರಣ ಜಾರಿಯಾಗುವಂತೆ ಆದೇಶಿಸಿ

ಇದೇ ತರಹದ ಉಲ್ಲಂಘನೆಗಳಿಗೆ ಚುನಾವಣಾ ಆಯೋಗವು ಭಾರತ ರಾಷ್ಟ್ರ ಸಮಿತಿ ಅಧ್ಯಕ್ಶರಾದ ಕೆ.ಸಿ.ರಾವ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ ( https://elections24.eci.gov.in/docs/AhtgLNsZsm.pdf ) ಹಾಗು ಕಾಂಗ್ರೆಸ್ ಪಕ್ಷದ ರಂದೀಪ್ ಸುರ್ಜೆವಾಲಾ ವಿರುದ್ಧ ಕ್ರಮ ತೆಗೆದುಕೊಂಡಿತು ( https://elections24.eci.gov.in/docs/U4pbNwetPL.pdf ). ಹಾಗಾಗಿ ಈ ವಿಷಯದಲ್ಲೂ ಸಹ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಂಬಿಕೆ ವ್ಯಕ್ತಪಡಿಸಿತು.

ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರವರು ಈಗಾಗಲೇ ಈ ಕುರಿತು FIR ದಾಖಲಾಗಿದ್ದು, ಚುನಾವಣಾ ಆಯೋಗವು X ರೊಂದಿಗೆ ಬಿಜೆಪಿ ಹಾಕಿರುವ ವಿಡಿಯೋವನ್ನು ತೆಗೆಯಲು ಪ್ರಯತ್ನಿಸುತ್ತಿರುವದಾಗಿ ತಿಳಿಸಿದರು.

ತಂಡದಲ್ಲಿ ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ದ್ವೇಷದ ಮಾತಿನ ವಿರುದ್ಧ ಜನಾಂದೋಲನ (CAHS), ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್ (AIDWA), ನಾವೆದ್ದು ನಿಲ್ಲದಿದ್ದರೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಎಸ್ (PUCL) ಮುಂತಾದ ಪ್ರಗತಿಪರ ಸಂಘಟನೆಗಳಿಂದ ಪ್ರತಿನಿಧಿಗಳಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9243190014 (ಮೈತ್ರೇಯಿ); 9880595032 (ವಿನಯ್ ಕೆ. ಎಸ)

ಹಿಂದೂಸ್ತಾನ್ ಸಮಾಚಾರ್


 rajesh pande