ರಾಯಚೂರು : ಮತಗಟ್ಟೆ ತಲುಪಿದ ಸಿಬ್ಬಂದಿ, ಮತದಾನಕ್ಕೆ ಸಕಲ ಸಿದ್ದತೆ
ರಾಯಚೂರು, 06 ಮೇ (ಹಿ.ಸ): ಆ್ಯಂಕರ್ : 6-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.7ರಂದು ಮತದಾನ ಪ್
ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ಮತಗಟ್ಟೆಗಳನ್ನು ತಲುಪಿದಮತದಾನ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ


ರಾಯಚೂರು, 06 ಮೇ (ಹಿ.ಸ):

ಆ್ಯಂಕರ್ : 6-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.7ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಇದಕ್ಕಾಗಿ ಇಂದು ಜಿಲ್ಲೆಯ ವಿವಿಧ ಮಸ್ಟರಿಂಗ್ ಕೇಂದ್ರಗಳಿಂದ ವಿವಿಧ ಮತಗಟ್ಟೆಗಳಿಗೆ ಒಟ್ಟು 8464 ಮತಗಟ್ಟೆ ಸಿಬ್ಬಂದಿ ಮತದಾನದ ಸಾಮಾಗ್ರಿಗಳೊಂದಿಗೆ ತೆರಳಿದ್ದಾರೆ.

ನಗರದ ಎಸ್ಆರ್ಪಿಎಸ್ ಪಿಯು ಕಾಲೇಜು ಆವರಣದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಗೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳನ್ನು ಹಾಗೂ ಮತದಾನ ಸಾಮಾಗ್ರಿಗಳನ್ನು ನೀಡಲಾಯಿತು.

ರಾಯಚೂರು ಗ್ರಾಮೀಣ ಕ್ಷೇತ್ರದ 275 ಹಾಗೂ ರಾಯಚೂರು ನಗರ ಕ್ಷೇತ್ರದ 250 ಮತಗಟ್ಟೆಗಳಿಗೆ ನಿಯೋಜಿಸಿದ್ದ ಮತಗಟ್ಟೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ತಮಗೆ ನೀಡಲಾದ ಮತಗಟ್ಟೆಗಳ ವಿವರಗಳನ್ನು ಪಡೆದು ಮತದಾನ ಕಾರ್ಯಕ್ಕೆ ತೆರಳಿದರು.

ಉಳಿದಂತೆ ಮಾನವಿ ವಿಧಾನ ಸಭಾ ಕ್ಷೇತ್ರದ 275, ದೇವದುರ್ಗ ವಿಧಾನಸಭಾ ಕ್ಷೇತ್ರದ 267, ಲಿಂಗಸುಗೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳಿಗೆ ಶೋರಾಪುರ ಕ್ಷೇತ್ರದ 317, ಶಹಪುರ ಕ್ಷೇತ್ರದ 265 ಹಾಗೂ ಯಾದಗಿರಿ ಕ್ಷೇತ್ರದ 268 ಮತಗಟ್ಟೆಗಳಿಗೆ ಆಯಾ ವಿಧಾನಸಭಾ ಕ್ಷೇತ್ರದ ತಾಲೂಕು ಕೇಂದ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಂದ ಮತಯಂತ್ರಗಳನ್ನು ಆಯಾ ಮತಗಟ್ಟೆ ಸಿಬ್ಬಂದಿಗೆ ವಿತರಿಸಲಾಯಿತು.

ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ, ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದ ಕಾರಣ ಶಾಮಿಯಾನದ ವ್ಯವಸ್ಥೆಯನ್ನು ಮಸ್ಟರಿಂಗ್ ಕೆಂದ್ರದಲ್ಲಿ ಮಾಡಲಾಗಿತ್ತು.

ಮಸ್ಟರಿಂಗ್ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರ ಭೇಟಿ: ಲೋಕಸಭಾ ಚುಣಾವಣೆ-2024ಕ್ಕೆ ಸಂಬಂಧಿಸಿದಂತೆ ಮೇ.7ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಅದರ ಹಿಂದಿನ ದಿನವಾದ ಮೇ.6ರಂದು ನಗರದ ಎಸ್.ಆರ್.ಪಿ.ಎಸ್ ಪಿಯು ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ್ ಪ್ರಕಾಶ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಶೀಲ್ದಾರ ಸುರೇಶ ವರ್ಮಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಎನ್ ಬಸರಿಗಿಡದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


 rajesh pande