ಆರ್.ಎಚ್.ಎಂ. ತಿಪ್ಪೇಸ್ವಾಮಿ ನಿಧನ
ಬಳ್ಳಾರಿ, 2 ಮೇ (ಹಿ.ಸ):ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸಧಸ್ಯ ಆರ್.ಎಚ್.ಎಂ. ತಿಪ್ಪೇಸ್ವಾಮಿ (೫
or his services to Scout


ಬಳ್ಳಾರಿ, 2 ಮೇ (ಹಿ.ಸ):ಆ್ಯಂಕರ್:

ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸಧಸ್ಯ ಆರ್.ಎಚ್.ಎಂ. ತಿಪ್ಪೇಸ್ವಾಮಿ (೫೦) ಅವರು ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಒಬ್ಬ ಮಗ, ಒಬ್ಬ ಮಗಳು ಹಾಗೂ ಅಪಾರ ಸಂಖ್ಯೆಯ ಬಂಧುಗಳು - ಮಿತ್ರರನ್ನು, ಸ್ನೇಹಿರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ೪ ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು-ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಕುಟುಂಬದ ಹಿರಿಯರು ತಿಳಿಸಿದ್ದಾರೆ.

ಮೃತರ ತಂದೆ ಆರ್.ಎಚ್.ಎಂ. ಸಿದ್ದಲಿಂಗಯ್ಯ ಅವರು ಸ್ಕೌಟ್ಸ್ ಅಂಡ್ ಗೈಡ್ಸ್, ಜಿಲ್ಲಾ ಹೋಂಗಾಡ್೯ನಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಮೃತರ ಆತ್ಮಕ್ಕೆ ಶಾಂತಿಕೋರಿ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande