ಡಾ.ಡಿ.ಎಸ್. ಜಯಪ್ಪಗೌಡ ಅವರಿಗೆ ಕನ್ನಡ ಸಂಸ್ಕೃತಿ ಪ್ರಶಸ್ತಿ
ಬೆಂಗಳೂರು, 02 ಮೇ (ಹಿ.ಸ): ಆ್ಯಂಕರ್ : ನಾಡೋಜ ಡಾ. ಎಂ. ಚಿದಾನಂದಮೂರ್ತಿಯವರು ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರ
ಡಾ.ಡಿ.ಎಸ್. ಜಯಪ್ಪಗೌಡ ಅವರಿಗೆ ಕನ್ನಡ ಸಂಸ್ಕೃತಿ ಪ್ರಶಸ್ತಿ


ಬೆಂಗಳೂರು, 02 ಮೇ (ಹಿ.ಸ):

ಆ್ಯಂಕರ್ : ನಾಡೋಜ ಡಾ. ಎಂ. ಚಿದಾನಂದಮೂರ್ತಿಯವರು ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರು. ಸಾಂಸ್ಕೃತಿಕ ಇತಿಹಾಸ, ಶಾಸನ ಶೋಧ, ಭಾಷಾ ವಿಜ್ಞಾನ, ಪ್ರಾಚೀನ ಕನ್ನಡ ಸಾಹಿತ್ಯ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ, ಹೀಗೆ ಹಲವು ಜ್ಞಾನ ಶಿಸ್ತುಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ ಮಹಾನ್ ಸಾಧಕರು. ವಿದ್ವತ್ ಕ್ಷೇತ್ರದಲ್ಲಿ ಮಾಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಚಿಮೂ, ‘ಸಾಹಿತಿಗಳ ಕಲಾವಿದರ ಬಳಗʼದ ಪ್ರಧಾನ ಸಂಚಾಲಕರಾಗಿ, ರಾಜ್ಯ ಮಟ್ಟದ ಮೊದಲ ಕನ್ನಡಪರ ಸಂಘಟನೆ ‘ಕನ್ನಡ ಶಕ್ತಿ ಕೇಂದ್ರʼದ ಸ್ಥಾಪಕ ಅಧ್ಯಕ್ಷರಾಗಿ ಸಂಘಟಿಸಿ, ಕನ್ನಡ ಹೋರಾಟಕ್ಕೆ ಅಗತ್ಯವಾಗಿದ್ದ ಘನತೆ-ಗಾಂಭೀರ್ಯವನ್ನು ತಂದುಕೊಟ್ಟವರು. ಅವರ ಬದುಕಿನುದ್ದಕ್ಕೂ ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಲು ಜೀವನಪರ್ಯಂತ ಶ್ರಮಿಸಿದವರು. ಅವರ ನೆನಪಿನಲ್ಲಿ ಕನ್ನಡ ಗೆಳೆಯರ ಬಳಗವು ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ಪ್ರಶಸ್ತಿಯು 5೦೦೦/-(ಐದು ಸಾವಿರ ರೂಪಾಯಿ) ನಗದು, ಪ್ರಶಸ್ತಿ ಫಲಕ, ಅಭಿನಂದನಪತ್ರ ಫಲ-ತಾಂಬೂಲಗಳನ್ನೊಳಗೊ0ಡಿದೆ.

2024ರ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ಗೆ ಸಂಶೋಧನೆ, ಇತಿಹಾಸ, ಹಸ್ತಪ್ರತಿ, ಶಾಸನ, ಅನುವಾದ, ರಾಜಕೀಯಶಾಸ್ತç, ವ್ಯಕ್ತಿ ಚಿತ್ರ, ವಿಶ್ವಕೋಶ ಕ್ಷೇತ್ರಗಳಲ್ಲಿ ಮೌಲೀಕ ಕೆಲಸ ಮಾಡಿರುವ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಸಂಶೋಧನ ಸಹಾಯಕ, ಭಾಷಾಂತರಕಾರ, ವಿಶ್ವಕೋಶ ಸಂಪಾದಕ ಡಾ.ಡಿ.ಎಸ್. ಜಯಪ್ಪಗೌಡ ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ಕಡಲಾಚೆಯ ಸಂಬ0ಧಗಳು, ಮೂಡಿಗೆರೆ ತಾಲ್ಲೂಕಿನ ೫ ಶಾಸನಗಳ ಶೋಧ, ಮೈಸೂರು ಒಡೆಯರ್, ಪ್ರಾಚೀನ ಕರ್ನಾಟಕದ ಅಧಿಕಾರ ಕೇಂದ್ರಗಳು ‘ದಿವಾನ್ ಎಂ.ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು (ಪಿಎಚ್.ಡಿಗೆ ಸಲ್ಲಿಸಿದ ನಿಬಂಧ), ಹೇಮಾವತಿ ಉಗುಮದ ಪರಿಸರ ಮತ್ತು ಸಂಸ್ಕೃತಿ ಇತ್ಯಾದಿಗಳಿವೆ.

ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ-೧೦(೧೦.೦೫.೨೦೨೪)ರಂದು ಮೈಸೂರಿನಲ್ಲಿರುವ ಜಯಪ್ಪಗೌಡರ ಸ್ವಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತಿç ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸ.ರ.ಸುದರ್ಶನ್, ಕ್ಯಾತನಹಳ್ಳಿ ರಾಮಣ್ಣ, ವ.ಚ. ಚನ್ನೆಗೌಡ ಮತ್ತು ಡಾ.ಡಿ. ಸ್ಮಿತಾ ರೆಡ್ಡಿ ಅವರ ವಿಶೇಷ ಉಪಸ್ಥಿತಿ ಇರುತ್ತದೆ.

ಹಿಂದೂಸ್ತಾನ್ ಸಮಾಚಾರ್


 rajesh pande