ಭಾರತ ಸದೃಢವಾಗಿರಬೇಕೆಂದರೆ ಬಿಜೆಪಿಗೆ ಮತದಾನ ಮಾಡಬೇಕು-ಯತ್ನಾಳ್
ಕಲಬುರಗಿ, 28 ಏಪ್ರಿಲ್ (ಹಿ.ಸ): ಆ್ಯಂಕರ್: ಹುಬ್ಬಳ್ಳಿಯಲ್ಲಿ ನೇಹಾ ಬದಲು ಮುಸ್ಲಿಂ ಯಾರಾದ್ರೂ ಸಾವಾಗಿದ್ರೆ ಮುಖ್ಯಮಂತ
ಭಾರತ ಸದೃಢವಾಗಿರಬೇಕೆಂದರೆ ಬಿಜೆಪಿಗೆ ಮತದಾನ ಮಾಡಬೇಕು-ಯತ್ನಾಳ್


ಕಲಬುರಗಿ, 28 ಏಪ್ರಿಲ್ (ಹಿ.ಸ): ಆ್ಯಂಕರ್: ಹುಬ್ಬಳ್ಳಿಯಲ್ಲಿ ನೇಹಾ ಬದಲು ಮುಸ್ಲಿಂ ಯಾರಾದ್ರೂ ಸಾವಾಗಿದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಟೀಂ ಅಲ್ಲಿ ಹೆಲಿಕಾಪ್ಟರ್ ಇಳಿಸುತ್ತಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾದಾಗ, ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆಯಾದಾಗ ರಾಹುಲ್ ಗಾಂಧಿ ಬರಬೇಕಿತ್ತು. ಅದೇ ಮುಸ್ಲಿಮರ ಕೊಲೆಯಾಗಿದ್ರೆ ಜಿಗಿದು ಬರುತ್ತಿದ್ದರು. ಮುಂದಿನ ಐದು ವರ್ಷ ಭಾರತ ಸದೃಢವಾಗಿರಬೇಕೆಂದರೆ ನಾವು ಕಡ್ಡಾಯವಾಗಿ ಮತದಾನ ಮಾಡಬೇಕು. ಇಲ್ಲದಿದ್ದರೆ ದೇಶ ಭಯೋತ್ಪಾದಕರ ಕೈಗೆ ಹೋಗಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನನ್ನ ಬಹಿರಂಗವಾಗಿ ನೇಣಿಗೆ ಹಾಕಲಾಗಿದೆ. ನಾವು ಹಿಂದೂಗಳು ಒಂದಾಗದಿದ್ದರೆ ಭಾರತ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊರೊನಾ ಸಮಯದಲ್ಲಿ ಲಸಿಕೆ ಕಂಡುಹಿಡಿಯಲು ಮೋದಿ ಕಾರಣ. ಆ ಸಂದರ್ಭದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಂದು ಮೋದಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದ್ದರು. ಬಳಿಕ ಅವರು ಲಸಿಕೆ ಹಾಕಿಸಿಕೊಂಡ್ರು. ಇವರ ಮಾತು ಕೇಳಿ ಎಷ್ಟೋ ಜನ ಲಸಿಕೆ ಪಡೆಯದೇ ಪ್ರಾಣತೆತ್ತರು ಎಂದು ಅವರು ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande