ಲಕ್ನೋ, 29 ಮಾರ್ಚ್ (ಹಿ.ಸ):ಆ್ಯಂಕರ್:
ಜೈಲು ಪಾಲಾಗಿದ್ದ ಗ್ಯಾಂಗ್ ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಅನ್ಸಾರಿ ಸಾವಿನ ಮೇಲೆ ಅನುಮಾನಗಳು ಶುರುವಾಗಿದ್ದು, ಸೂಕ್ತ ತನಿಖೆ ಆಗಬೇಕು ಎಂಬ ಕೂಗುಗಳು ಕೇಳಿಬಂದಿವೆ.
ಅವರ ಪುತ್ರ ಉಮರ್ ಅನ್ಸಾರಿ, ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅಪ್ಪನ ಸಾವಿನ ಬಗ್ಗೆ ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾಧ್ಯಮಗಳ ಮೂಲಕ ಸಾವಿನ ಬಗ್ಗೆ ನನಗೆ ತಿಳಿದಿದೆ. ಸದ್ಯ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ಎರಡು ದಿನಗಳ ಹಿಂದೆ ನನ್ನ ತಂದೆಯನ್ನ ಭೇಟಿಯಾಗಲು ಬಂದಿದ್ದೆ, ಆದರೆ ಅವಕಾಶ ನೀಡಲಿಲ್ಲ. ನಮ್ಮ ತಂದೆಗೆ ವಿಷ ಹಾಕಿ ಸಾಯಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಿದ್ದೆ. ಇವತ್ತು ಅದನ್ನೇ ಹೇಳುತ್ತೇನೆ, ಸ್ವೋ ಪಾಯ್ಸನ್ ಹಾಕಿ ಸಾಯಿಸಿದ್ದಾರೆ. ಮಾರ್ಚ್ 19ರಂದು ಔತಣಕೂಟದಲ್ಲಿ ವಿಷ ಸೇವಿಸಿದ್ದಾರೆ. ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ. ನಮಗೆ ಅದರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್