ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮಾನವರಹಿತ ಹಡಗಿನ ಮೇಲೆ ಇರಾನ್ ದಾಳಿ
ಟೆಹ್ರಾನ್/ವಾಷಿಂಗ್ಟನ್,11 ಸೆಪ್ಟೆಂಬರ್(ಹಿ.ಸ.): ಆ್ಯಂಕರ್:ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ‘ಸೇಲ್‌ಡ್ರೋನ್’ ಮಾದರಿಯ ಮಾನವರಹಿತ ಹಡಗಿನ ಮೇಲೆ ದಾಳಿ ನಡೆಸಿ ಅದರ ಉದ್ದೇಶವನ್ನು ವಿಫಲಗೊಳಿಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆ ಹೇಳಿದೆ. ಇದೇ ವೇಳೆ, ಇರಾನ್‌
सांकेतिक।


ಟೆಹ್ರಾನ್/ವಾಷಿಂಗ್ಟನ್,11 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್:ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ‘ಸೇಲ್‌ಡ್ರೋನ್’ ಮಾದರಿಯ ಮಾನವರಹಿತ ಹಡಗಿನ ಮೇಲೆ ದಾಳಿ ನಡೆಸಿ ಅದರ ಉದ್ದೇಶವನ್ನು ವಿಫಲಗೊಳಿಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆ ಹೇಳಿದೆ. ಇದೇ ವೇಳೆ, ಇರಾನ್‌ನ ಪ್ರಬಲ ಬೆಂಬಲ ಹೊಂದಿರುವ ಯೆಮನ್‌ನ ಹೂತಿ ಬಂಡುಕೋರರು ಕೆಂಪು ಸಮುದ್ರದ ಪ್ರಮುಖ ನಗರ ಮೊಚಾ ಮೇಲೆ ಹಿಡಿತ ಸಾಧಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಹೂತಿಗಳ ಮೊಚಾ ವಶಪಡಿಸಿಕೊಳ್ಳುವಿಕೆಯಿಂದ ಬಾಬ್ ಅಲ್-ಮಂದೆಬ್ ಜಲಸಂಧಿ ಮೇಲಿನ ಅವರ ನಿಯಂತ್ರಣ ಮತ್ತಷ್ಟು ವಿಸ್ತರಿಸಿದೆ. ಜಗತ್ತಿನ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿರುವ ಈ ಪ್ರದೇಶದಲ್ಲಿನ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯೆಮನ್ ಕುರಿತು ಸಭೆ ನಡೆಸಿದೆ.

ಯುನೈಟೆಡ್ ಕಿಂಗ್‌ಡಮ್‌ನ ಸಮುದ್ರ ವ್ಯಾಪಾರ ಕಾರ್ಯಾಚರಣೆ ಕೇಂದ್ರಕ್ಕೆ ಒಮಾನ್ ಕರಾವಳಿ ಸಮೀಪ ಎರಡು ಹಡಗುಗಳಿಗೆ ಕ್ಷಿಪಣಿ ಅಥವಾ ರಾಕೆಟ್‌ನಂತಹ ಶಸ್ತ್ರಾಸ್ತ್ರಗಳು ಅಪ್ಪಳಿಸಿರುವ ಕುರಿತು ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ.

ಭದ್ರತಾ ಮಂಡಳಿ ಸಭೆಯಲ್ಲಿ ಯೆಮನ್ ಸರ್ಕಾರದ ಪ್ರತಿನಿಧಿ, ನೆರೆ ರಾಷ್ಟ್ರಗಳು ಮತ್ತು ನಾಗರಿಕರ ವಿರುದ್ಧ ಹೂತಿ ಬಂಡುಕೋರರ ಆಕ್ರಮಣ ಹೆಚ್ಚಾಗಿದೆ ಎಂದು ಆರೋಪಿಸಿದರು. ಸೌದಿ ಅರೇಬಿಯಾದ ವಿಶ್ವಸಂಸ್ಥೆ ಪ್ರತಿನಿಧಿ ಅಬ್ದುಲ್ ಅಜೀಜ್ ಅಲ್-ವಾಸಿಲ್, ಹೂತಿ ದಾಳಿಗಳನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ತಮ್ಮ ದೇಶದ ಭದ್ರತೆಯನ್ನು ರಕ್ಷಿಸುವುದಾಗಿ ಹೇಳಿದರು.

ಯೆಮನ್‌ನಲ್ಲಿನ ಸಂಘರ್ಷವು ಇಡೀ ಪ್ರದೇಶದ ಮೇಲೆ ದೂರಗಾಮಿ ಪರಿಣಾಮ ಬೀರಬಹುದೆಂದು ಪಾಕಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಎಚ್ಚರಿಸಿದ್ದು, ಶೀಘ್ರ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದ್ದಾರೆ.

ಈ ನಡುವೆ ಇರಾನ್ ವಿದೇಶಾಂಗ ಸಚಿವಾಲಯ, ಯೆಮನ್ ಒತ್ತಡ, ಬೆದರಿಕೆ ಹಾಗೂ ಕಠಿಣ ಮುತ್ತಿಗೆಯಿಂದ ಮುಕ್ತವಾಗಿ ಗೌರವಯುತವಾಗಿ ಬದುಕುವ ಹಕ್ಕು ಹೊಂದಿದೆ ಎಂದು ಹೇಳಿದೆ. ಯೆಮನ್‌ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಆಗ್ರಹಿಸಿರುವ ಸಚಿವಾಲಯ, ನಿರಂತರ ಮುತ್ತಿಗೆ ಹಾಗೂ ಸೇನಾ ನೆರವಿನಿಂದ ಯೆಮನ್ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದೆ. ಯೆಮನ್ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಪ್ರಯತ್ನ ನಡೆಸಲು ಇರಾನ್ ಸಿದ್ಧವಿದೆ ಎಂದೂ ಹೇಳಿದೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಧ್ಯಂತರ ಚುನಾವಣೆಯ ಮೇಲೆ ಪ್ರಭಾವ ಬೀರಲು ಇರಾನ್ ತೀವ್ರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಮಧ್ಯಂತರ ಚುನಾವಣೆ ಮುಗಿದ ಕೂಡಲೇ ಸಂಘರ್ಷ ಅಂತ್ಯಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ ಅವರು, ಇರಾನ್ ಇನ್ನು ಹೆಚ್ಚು ಕಾಲ ಸಂಘರ್ಷ ಮುಂದುವರಿಸುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande