ವಿಶ್ವಕ್ಕೆ ವೈವಿಧ್ಯತೆಯಲ್ಲಿ ಏಕತೆಯ ಅರಿವು ಮೂಡಿಸುವುದು ಭಾರತದ ಧ್ಯೇಯ : ಮೋಹನ್ ಭಾಗವತ್
ನ್ಯೂಯಾರ್ಕ್, 30 ಆಗಸ್ಟ್ (ಹಿ.ಸ.): ಆ್ಯಂಕರ್:ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸಂದೇಶ, ಧ್ಯೇಯ ಹಾಗೂ ನಿಯತಿ ಇರುತ್ತದೆ. ಭಾರತದ ಧ್ಯೇಯ ಜಗತ್ತಿಗೆ ವೈವಿಧ್ಯತೆಯಲ್ಲಿ ಏಕತೆಯ ಅರಿವು ಮೂಡಿಸುವುದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು. ನ್ಯೂಯಾರ್ಕ್‌
कार्यक्रम से जुड़ा दृश्य


ನ್ಯೂಯಾರ್ಕ್, 30 ಆಗಸ್ಟ್ (ಹಿ.ಸ.):

ಆ್ಯಂಕರ್:ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸಂದೇಶ, ಧ್ಯೇಯ ಹಾಗೂ ನಿಯತಿ ಇರುತ್ತದೆ. ಭಾರತದ ಧ್ಯೇಯ ಜಗತ್ತಿಗೆ ವೈವಿಧ್ಯತೆಯಲ್ಲಿ ಏಕತೆಯ ಅರಿವು ಮೂಡಿಸುವುದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು.

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ‘ಎಹೆಡ್ ಫೋರಂ’ ಆಯೋಜಿಸಿದ್ದ ಸಾರ್ವತ್ರಿಕ ಏಕತೆಯ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಉಲ್ಲೇಖಿಸಿದರು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸ್ವತಃ ಅರಿತುಕೊಂಡು, ಕಾಲಕಾಲಕ್ಕೆ ಇಡೀ ಜಗತ್ತಿಗೂ ಅದರ ಮಹತ್ವವನ್ನು ತಿಳಿಸಬೇಕಿದೆ ಎಂದರು.

ವೈವಿಧ್ಯತೆಯು ಏಕತೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ, ಏಕತೆಯನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಆದ್ದರಿಂದ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಅದನ್ನು ಸಂಭ್ರಮದಿಂದ ಸ್ವೀಕರಿಸಬೇಕು ಎಂದು ಅವರು ಹೇಳಿದರು.

ಜನರ ದೇಹ, ಉಡುಪು, ಭಾಷೆ, ಸಂಸ್ಕೃತಿ ಹಾಗೂ ಆರಾಧನಾ ಪದ್ಧತಿಗಳು ವಿಭಿನ್ನವಾಗಿರಬಹುದು. ಆದರೆ ಎಲ್ಲರನ್ನೂ ಒಂದುಗೂಡಿಸುವ ಶಾಶ್ವತ ತತ್ವವಿದೆ. ಒಂದೇ ದಾರದಲ್ಲಿ ಪೋಣಿಸಲಾದ ವಿವಿಧ ಮಣಿಗಳಂತೆ ಮಾನವ ಸಮಾಜದಲ್ಲಿಯೂ ಏಕತೆಯ ಭಾವನೆ ಅಡಕವಾಗಿದೆ ಎಂದು ಭಾಗವತ್ ವಿವರಿಸಿದರು.

ಭಾರತೀಯರು ತಮ್ಮ ಮಾತುಗಳಿಗಿಂತಲೂ ತಮ್ಮ ನಡವಳಿಕೆ ಮತ್ತು ಆಚಾರ-ವಿಚಾರಗಳ ಮೂಲಕ ವಿಶ್ವಕ್ಕೆ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ನೀಡಬೇಕು. ಈ ಮೂಲಕವೇ ಭಾರತ ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಹೇಳಿದರು.

ಮಾನವ ಜೀವನದ ಉದ್ದೇಶ ಕೇವಲ ಭೌತಿಕ ಸುಖ-ಸೌಕರ್ಯಗಳನ್ನು ಪಡೆಯುವುದಲ್ಲ. ಭಾರತೀಯ ಪರಂಪರೆಯಲ್ಲಿ ಸತ್ಯದ ಅನ್ವೇಷಣೆ, ಮುಕ್ತಿಯತ್ತ ಸಾಗುವುದು ಹಾಗೂ ವಿಶ್ವದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವುದಕ್ಕೂ ಮಹತ್ವ ನೀಡಲಾಗಿದೆ ಎಂದರು.

ಧರ್ಮವೆಂದರೆ ಕೇವಲ ಮತ ಅಥವಾ ಆರಾಧನಾ ಪದ್ಧತಿಯಲ್ಲ. ವ್ಯಕ್ತಿ, ಸಮಾಜ ಮತ್ತು ಪರಿಸರದ ನಡುವೆ ಸಮತೋಲನ ಕಾಪಾಡುವ ತತ್ವವೇ ಧರ್ಮವಾಗಿದೆ. ಈ ಅರಿವನ್ನು ಭಾರತ ತನ್ನ ನಡವಳಿಕೆಯ ಮೂಲಕ ವಿಶ್ವಕ್ಕೆ ತಲುಪಿಸಬೇಕಿದೆ ಎಂದು ಮೋಹನ್ ಭಾಗವತ್ ಹೇಳಿದರು.

ಕಾರ್ಯಕ್ರಮದಲ್ಲಿ ಅಮೆರಿಕದ 39 ರಾಜ್ಯಗಳ 853 ನಗರಗಳಿಂದ ಸುಮಾರು 6,000 ಪ್ರತಿನಿಧಿಗಳು, ವಿವಿಧ ವಿಶ್ವವಿದ್ಯಾಲಯಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ 250ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 30 ದೇಶಗಳ 180 ಧಾರ್ಮಿಕ ನಾಯಕರು ಭವಿಷ್ಯದ ಜವಾಬ್ದಾರಿಯನ್ನು ನಿರ್ಧರಿಸುವ ಐದು ಅಂಶಗಳ ಕಾರ್ಯಯೋಜನೆಯನ್ನು ಪ್ರಕಟಿಸಿದರು.

ಧರ್ಮವನ್ನು ದ್ವೇಷ, ಅವಮಾನ, ಅಮಾನವೀಯ ವರ್ತನೆ ಅಥವಾ ಹಿಂಸೆಯನ್ನು ಸಮರ್ಥಿಸಲು ಬಳಸಬಾರದು ಎಂದು ಧಾರ್ಮಿಕ ನಾಯಕರು ಸ್ಪಷ್ಟಪಡಿಸಿದರು. ‘ಒಂದು ವಿಶ್ವ, ಒಂದು ಮಾನವತೆ’ ಎಂಬ ಆಶಯದೊಂದಿಗೆ ಅಂಗೀಕರಿಸಲಾದ ನಿರ್ಣಯದಲ್ಲಿ ಪ್ರತಿಯೊಂದು ಸಮುದಾಯದ ಗೌರವ ಮತ್ತು ಸುರಕ್ಷತೆಗಾಗಿ ನಿಲ್ಲುವ ಬದ್ಧತೆಯನ್ನು ವ್ಯಕ್ತಪಡಿಸಲಾಯಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande