ನೇಪಾಳ ಜಲವಿದ್ಯುತ್ ಯೋಜನೆಯಿಂದ ನಾಲ್ವರು ಭಾರತೀಯರ ರಕ್ಷಣೆ; 287 ಮಂದಿ ನಾಪತ್ತೆ
ನವದೆಹಲಿ, 29 ಆಗಸ್ಟ್ (ಹಿ.ಸ.): ಆ್ಯಂಕರ್:ನೇಪಾಳದಲ್ಲಿ ಭಾರಿ ಪ್ರವಾಹ ಹಾಗೂ ಭೂಕುಸಿತದ ಬಳಿಕ ಮುಂದುವರಿದಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಶನಿವಾರ ಜಲವಿದ್ಯುತ್ ಯೋಜನೆಯೊಂದರಿಂದ ನಾಲ್ವರು ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ರಿಪು ಕುಮಾರ್, ಚಂದ್ರಶೇಖರ್ ನರಜರಿ, ಕೃ
नेपाल में बाढ़ (फाइल फोटो)।


ನವದೆಹಲಿ, 29 ಆಗಸ್ಟ್ (ಹಿ.ಸ.):

ಆ್ಯಂಕರ್:ನೇಪಾಳದಲ್ಲಿ ಭಾರಿ ಪ್ರವಾಹ ಹಾಗೂ ಭೂಕುಸಿತದ ಬಳಿಕ ಮುಂದುವರಿದಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಶನಿವಾರ ಜಲವಿದ್ಯುತ್ ಯೋಜನೆಯೊಂದರಿಂದ ನಾಲ್ವರು ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ರಿಪು ಕುಮಾರ್, ಚಂದ್ರಶೇಖರ್ ನರಜರಿ, ಕೃಪಾಶಂಕರ್ ಹಾಗೂ ಮೊಹಮ್ಮದ್ ಮಿನ್ಹಾಜುದ್ದೀನ್ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇವರು ಶೀಘ್ರದಲ್ಲೇ ಕಠ್ಮಂಡುವಿಗೆ ತಲುಪುವ ನಿರೀಕ್ಷೆಯಿದೆ.

ನಾಪತ್ತೆಯಾದವರ ಪತ್ತೆ ಹಾಗೂ ಮೃತರ ಗುರುತಿನ ದೃಢೀಕರಣಕ್ಕೆ ನೆರವಾಗಲು ಭಾರತವು ವಿಧಿವಿಜ್ಞಾನ ತಜ್ಞರು ಮತ್ತು ಸುರಂಗ ರಕ್ಷಣಾ ಪರಿಣತರ ತಂಡಗಳನ್ನು ನೇಪಾಳಕ್ಕೆ ಕಳುಹಿಸಿದೆ. ಆರು ಸದಸ್ಯರ ವಿಧಿವಿಜ್ಞಾನ ತಜ್ಞರ ತಂಡವು ಮೃತರ ಅವಶೇಷಗಳಿಂದ ಡಿಎನ್‌ಎ ಮಾದರಿಗಳನ್ನು ವಿಶ್ಲೇಷಿಸಿ ಗುರುತು ಪತ್ತೆ ಕಾರ್ಯದಲ್ಲಿ ನೇಪಾಳಿ ಅಧಿಕಾರಿಗಳಿಗೆ ನೆರವಾಗಲಿದೆ.

ಈಗಾಗಲೇ ಸುರಂಗ ರಕ್ಷಣೆಗೆ ಕಳುಹಿಸಲಾದ ವಿಶೇಷ ತಾಂತ್ರಿಕ ತಂಡ ಕಠ್ಮಂಡು ತಲುಪಿದ್ದು, ಪೀಡಿತ ಪ್ರದೇಶದಲ್ಲಿ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದೆ. ತಂಡದ ಶಿಫಾರಸಿನ ಆಧಾರದ ಮೇಲೆ ವಿಶೇಷ ಸುರಂಗ ರಕ್ಷಣಾ ಸಾಧನಗಳೊಂದಿಗೆ ಮತ್ತೊಂದು ತಂಡ ನೇಪಾಳಕ್ಕೆ ತೆರಳಲಿದೆ ಎಂದು ಸಚಿವಾಲಯ ತಿಳಿಸಿದೆ.

ಚೀನಾ ಮೂಲಕ ಶನಿವಾರ 120 ಭಾರತೀಯ ನಾಗರಿಕರು ನೇಪಾಳದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಇದುವರೆಗೆ ಒಟ್ಟು 88 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 287 ಭಾರತೀಯರು ನಾಪತ್ತೆಯಾಗಿದ್ದಾರೆ. ಭಾರತೀಯ ಮೂಲದ 128 ಮಂದಿಯೂ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಆ.26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಹಲವು ಪ್ರದೇಶಗಳಲ್ಲಿ ರಸ್ತೆ, ಸೇತುವೆ ಹಾಗೂ ಸಂಪರ್ಕ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ. ಇದರಿಂದ ರಕ್ಷಣಾ ತಂಡಗಳು ಪೀಡಿತ ಪ್ರದೇಶಗಳನ್ನು ತಲುಪಲು ತೊಂದರೆ ಎದುರಿಸುತ್ತಿವೆ.

ಭಾರತವು ನೇಪಾಳದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಸಾಮಗ್ರಿಗಳ ಜೊತೆಗೆ ವೈದ್ಯಕೀಯ, ಸುರಂಗ ರಕ್ಷಣಾ ಹಾಗೂ ತಾಂತ್ರಿಕ ನೆರವು ಒದಗಿಸುತ್ತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande