ಪತ್ರಕರ್ತರಿಗೆ ಎಐ ಹಾಗೂ ಸತ್ಯಾಸತ್ಯತೆ ಪರಿಶೀಲನೆ ವಿಶೇಷ ಆನ್ಲೈನ್ ತರಬೇತಿ
ಬಳ್ಳಾರಿ, 10 ಆಗಸ್ಟ್ (ಹಿ.ಸ.) ಆ್ಯಂಕರ್: ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ನವದೆಹಲಿಯ ‘ಡೇಟಾಲೀಡ್ಸ್'' ಸಂಸ್ಥೆಯ ಜಂಟಿ ಸಹಯೋಗದಲ್ಲಿ ಪತ್ರಕರ್ತರು, ಸಂಪಾದಕರು ಮತ್ತು ಸುದ್ದಿ ಸಂಸ್ಥೆಯ ಸಿಬ್ಬಂದಿಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕುರಿತು ವಿಶೇಷ ಆನ್ಲೈನ್ ತರಬೇತಿ ಕಾರ್ಯಾಗಾರವನ್ನು ಆ
ಪತ್ರಕರ್ತರಿಗೆ ಎಐ ಹಾಗೂ ಸತ್ಯಾಸತ್ಯತೆ ಪರಿಶೀಲನೆ ವಿಶೇಷ ಆನ್ಲೈನ್ ತರಬೇತಿ


ಬಳ್ಳಾರಿ, 10 ಆಗಸ್ಟ್ (ಹಿ.ಸ.)

ಆ್ಯಂಕರ್: ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ನವದೆಹಲಿಯ ‘ಡೇಟಾಲೀಡ್ಸ್' ಸಂಸ್ಥೆಯ ಜಂಟಿ ಸಹಯೋಗದಲ್ಲಿ ಪತ್ರಕರ್ತರು, ಸಂಪಾದಕರು ಮತ್ತು ಸುದ್ದಿ ಸಂಸ್ಥೆಯ ಸಿಬ್ಬಂದಿಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕುರಿತು ವಿಶೇಷ ಆನ್ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಸುದ್ದಿ ಮಾಧ್ಯಮಗಳಲ್ಲಿ ಎಐ ತಂತ್ರಜ್ಞಾನದ ಸದುಪಯೋಗ, ಎಐ-ಸೃಷ್ಟಿತ ವಿಷಯಗಳ ಸತ್ಯಾಸತ್ಯತೆ ಪರಿಶೀಲನೆ, ವಾಟರ್ ಮಾರ್ಕಿಂಗ್ ಹಾಗೂ ವಿಷಯಗಳ ಮೂಲ ಪತ್ತೆ ಹಚ್ಚುವ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಿಕೊಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ.

*ಕಾರ್ಯಾಗಾರದ ಪ್ರಮುಖ ಮುಖ್ಯಾಂಶಗಳು:*

ಪ್ರಾಯೋಗಿಕ ತರಬೇತಿ: ಎಐ ಪರಿಕರಗಳ ಬಳಕೆ ಮತ್ತು ಮಾಹಿತಿ/ಚಿತ್ರಗಳ ಸತ್ಯಾಸತ್ಯತೆ ಪರಿಶೀಲಿಸುವ ವಿಧಾನಗಳ ಕುರಿತು ನೇರ ತರಬೇತಿ.

ಸಂಪಾದಕೀಯ ಮಾರ್ಗದರ್ಶನ: ದಿನನಿತ್ಯದ ಸಂಪಾದಕೀಯ ಪ್ರಕ್ರಿಯೆಗಳಲ್ಲಿ ಹೊಸ ತಂತ್ರಜ್ಞಾನವನ್ನು ಸುಲಭವಾಗಿ ಅಳವಡಿಸಿಕೊಳ್ಳುವ ಬಗ್ಗೆ ಸಲಹೆಗಳು.

ಪರಿಕರಗಳ ಬಳಕೆ: ಭಾಗವಹಿಸುವ ಪತ್ರಕರ್ತರಿಗೆ ಎಐ ಉಪಕರಣಗಳನ್ನು ಉಚಿತವಾಗಿ ಬಳಸಲು ಅವಕಾಶ.

ನಿರಂತರ ಬೆಂಬಲ: ತಂತ್ರಜ್ಞಾನ ಬದಲಾದಂತೆ ಭಾಗವಹಿಸಿದವರಿಗೆ ನಿರಂತರ ಮಾರ್ಗದರ್ಶನ ಮತ್ತು ಪುನಶ್ಚೇತನ ಗೋಷ್ಠಿಗಳ ಸೌಲಭ್ಯ.

ಆನ್ ಲೈನ್ ತರಬೇತಿಯು ಆಗಸ್ಟ್ 19 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ.

ಆಸಕ್ತ ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಆಗಸ್ಟ್ 16 ರೊಳಗೆ https://forms.gle/WFTDmJJkhbcagMEd8 ಲಿಂಕ್ ಮೂಲಕ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande