
ನವದೆಹಲಿ, 15 ಜುಲೈ (ಹಿ.ಸ.):
ಆ್ಯಂಕರ್:
ವಿದ್ಯೆಯಿಂದ ವಿವೇಕ, ಕೌಶಲದಿಂದ ಅಭಿವೃದ್ಧಿ ಹಾಗೂ ಉತ್ತಮ ಆರೋಗ್ಯದಿಂದ ಪ್ರತಿಯೊಂದು ಸಂಕಲ್ಪವೂ ಸಫಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಹಾಭಾರತದ ಯಕ್ಷ–ಯುಧಿಷ್ಠಿರ ಸಂವಾದದಲ್ಲಿರುವ ಒಂದು ಸುಭಾಷಿತವನ್ನು ಹಂಚಿಕೊಂಡ ಪ್ರಧಾನಿ, ಇಂದಿನ ಯುವಕರು ಈ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಹಂಚಿಕೊಂಡಿರುವ ಸುಭಾಷಿತದ ಅರ್ಥವೆಂದರೆ, ಎಲ್ಲ ಗುಣಗಳಲ್ಲಿ ಕೌಶಲವೇ ಶ್ರೇಷ್ಠ, ಎಲ್ಲ ಸಂಪತ್ತಿಗಿಂತ ವಿದ್ಯೆಯೇ ಶ್ರೇಷ್ಠ, ಎಲ್ಲ ಲಾಭಗಳಲ್ಲಿ ಉತ್ತಮ ಆರೋಗ್ಯವೇ ಶ್ರೇಷ್ಠ ಹಾಗೂ ಎಲ್ಲ ಸುಖಗಳಲ್ಲಿ ಸಂತೋಷವೇ ಅತ್ಯುತ್ತಮವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.