ಬಳ್ಳಾರಿ : `ಹಸಿರು ಹೊದಿಕೆ' ಗೆ ಸಾರ್ವಜನಿಕರ ಮೆಚ್ಚುಗೆ
ಬಳ್ಳಾರಿ, 06 ಮೇ (ಹಿ.ಸ.) : ಆ್ಯಂಕರ್ : ವಾಹನ ಸವಾರರು ಮತ್ತು ಸಾರ್ವಜನಿಕರು ಬಿಸಿಲ ತಾಪಮಾನದಿಂದ ರಕ್ಷಣೆ ಪಡೆಯಲಿಕ್ಕಾಗಿ ಬಳ್ಳಾರಿಯ ಶ್ರೀ ಕನಕದುರ್ಗಮ್ಮ ಗುಡಿ ಸರ್ಕಲ್, ಇಂದಿರಾ ಸರ್ಕಲ್ ನಲ್ಲಿ ಹಸಿರು ಹೊದಿಕೆಯನ್ನು ಅಳವಡಿಸಿರುವಂತೆ ಬಳ್ಳಾರಿಯ ಕಂಟೋನ್ಮೆಂಟ್ ರೈಲ್ವೆಗೇಟ್ ಮುಂಭಾಗದಲ್ಲಿ ಹಸಿರು ಹ
ಬಳ್ಳಾರಿ : `ಹಸಿರು ಹೊದಿಕೆ' ಸಾರ್ವಜನಿಕರ ಮೆಚ್ಚುಗೆ


ಬಳ್ಳಾರಿ, 06 ಮೇ (ಹಿ.ಸ.) :

ಆ್ಯಂಕರ್ : ವಾಹನ ಸವಾರರು ಮತ್ತು ಸಾರ್ವಜನಿಕರು ಬಿಸಿಲ ತಾಪಮಾನದಿಂದ ರಕ್ಷಣೆ ಪಡೆಯಲಿಕ್ಕಾಗಿ ಬಳ್ಳಾರಿಯ ಶ್ರೀ ಕನಕದುರ್ಗಮ್ಮ ಗುಡಿ ಸರ್ಕಲ್, ಇಂದಿರಾ ಸರ್ಕಲ್ ನಲ್ಲಿ ಹಸಿರು ಹೊದಿಕೆಯನ್ನು ಅಳವಡಿಸಿರುವಂತೆ ಬಳ್ಳಾರಿಯ ಕಂಟೋನ್ಮೆಂಟ್ ರೈಲ್ವೆಗೇಟ್ ಮುಂಭಾಗದಲ್ಲಿ ಹಸಿರು ಹೊದಿಕೆ ಅಳವಡಿಸಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ಮಾಜಿ ಮಹಾಪೌರರು ಹಾಗೂ ಪಾಲಿಕೆ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು ಅವರು ರೈಲ್ವೆ ಗೇಟ್ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರು ಬಿಸಿಲ ತಾಪದಿಂದ ರಕ್ಷಣೆ ಪಡೆಯಲಿಕ್ಕಾಗಿ ಹಸಿರು ಹೊದಿಕೆಯನ್ನು ಅಳವಡಿಸಲು ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಹಸಿರು ಹೊದಿಕೆಯನ್ನು ಅಳವಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande