


ಬಳ್ಳಾರಿ, 28 ಮೇ (ಹಿ.ಸ.) :
ಆ್ಯಂಕರ್ : ನಂದೀಪುರ ಅಜ್ಜನವರ ಪುಣ್ಯಾರಾಧನೆಯ ಪೂರ್ವಭಾವಿ ಸಭೆ ಮತ್ತು ಗಾಂಧಾರಿ ವಿದ್ಯೆಯ ತರಬೇತಿ ಬಳ್ಳಾರಿಯ ಬಸವೇಶ್ವರನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಜಂಟಿಯಾಗಿ ನಡೆದವು.
ನಂದೀಪುರ ಅಜ್ಜನವರ ಪುಣ್ಯಾರಾಧನೆಯ ಪೂರ್ವಭಾವಿ ಸಭೆಯ ನೇತೃತ್ವವನ್ನು ಶ್ರೀಮಠದ ಪೀಠಾಧಿಪತಿಗಳಾದ ಮಹೇಶ್ವರಸ್ವಾಮಿಗಳು ವಹಿಸಿದ್ದರು.
ಚಿದಂಬರರಾವ್ ಅವರ ನೇತೃತ್ವದಲ್ಲಿ 15 ವಿದ್ಯಾರ್ಥಿಗಳಿಗೆ ಗಾಂಧಾರಿ ವಿದ್ಯೆಯನ್ನು ಹೇಳಿಕೊಡಲಾಯಿತು. ಸಿ.ಕೆ. ಪ್ರಕಾಶ್ ಮತ್ತು ಎ. ರಾಘವೇಂದ್ರ ಅವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್