ಬಿಸಿಗಾಳಿ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿ : ಪ್ರಧಾನಿ ಮೋದಿ ಮನವಿ
Pm


ನವದೆಹಲಿ, 27 ಮೇ (ಹಿ.ಸ.) :

ಆ್ಯಂಕರ್ : ದೇಶದ ನಾನಾ ಭಾಗಗಳಲ್ಲಿ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಎಕ್ಸ್ ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಪ್ರಧಾನಿ ಮೋದಿ, “ದೇಶದ ಹಲವು ಭಾಗಗಳಲ್ಲಿ ತಾಪಮಾನ ನಿರಂತರವಾಗಿ ಏರುತ್ತಿದೆ. ಅದರೊಂದಿಗೆ ಬಿಸಿಗಾಳಿಯಿಂದ ಉಂಟಾಗುವ ದೈನಂದಿನ ತೊಂದರೆಗಳೂ ಹೆಚ್ಚುತ್ತಿವೆ. ಆದ್ದರಿಂದ ನನ್ನ ಎಲ್ಲಾ ದೇಶವಾಸಿಗಳು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು” ಎಂದು ತಿಳಿಸಿದ್ದಾರೆ.

“ಪ್ರತಿಯೊಬ್ಬರೂ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಮನೆಯಿಂದ ಹೊರಡುವಾಗ ಕಡ್ಡಾಯವಾಗಿ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

ಇದೇ ವೇಳೆ ಮಾನವೀಯತೆ ಮತ್ತು ಪರಸ್ಪರ ಸಹಾಯದ ಮಹತ್ವವನ್ನೂ ಒತ್ತಿಹೇಳಿರುವ ಪ್ರಧಾನಿ ಮೋದಿ, “ಈ ರೀತಿಯ ಹವಾಮಾನದಲ್ಲಿ ನಿಮ್ಮ ಸೂಕ್ಷ್ಮತೆ ಮತ್ತು ಸಹಾನುಭೂತಿಯೂ ದೊಡ್ಡ ಬೆಂಬಲವಾಗುತ್ತದೆ. ಸಾಧ್ಯವಾದರೆ ಬಾಯಾರಿದವರಿಗೆ ಒಂದು ಲೋಟ ನೀರು ನೀಡಿ” ಎಂದು ಕೋರಿದ್ದಾರೆ.

ಮನೆಗಳು ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರಿಗಾಗಿ ಮಡಕೆಗಳಲ್ಲಿ ನೀರು ಇಡುವವರನ್ನು ಪ್ರಶಂಸಿಸಿರುವ ಅವರು, “ಇತರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವವರ ಸೇವೆ ಶ್ಲಾಘನೀಯ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande