
ಬೆಂಗಳೂರು, 25 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬಿಐಎಎಲ್ ಸಂಸ್ಥೆಯಲ್ಲಿ ಕೆಎಸ್ಐಐಡಿಯ ಹೊಂದಿರುವ 13% ಹೂಡಿಕೆಗೆ 2025–26ನೇ ಸಾಲಿನಲ್ಲಿ ₹16.49 ಕೋಟಿ ಲಾಭಾಂಶ ಲಭಿಸಿದ್ದು, ಲಾಭಾಂಶದ ಚೆಕ್ ಅನ್ನು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಯಿತು.
ಕೆಎಸ್ಐಐಡಿಯ ಪರವಾಗಿ ಬಿಐಎಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹರಿ ಕೆ ಮರಾರ್ ಅವರು ಚೆಕ್ ಹಸ್ತಾಂತರಿಸಿದರು. ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾ ಎಂ ಬಿ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಕೆಎಸ್ಐಐಡಿಯ ವ್ಯವಸ್ಥಾಪಕ ನಿರ್ದೇಶಕರಾದ ಖುಷ್ಪೂ ಗೋಯಲ್ ಚೌಧರಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.