ಸುಸ್ಥಿರ ಕೃಷಿಗೆ ಮಣ್ಣಿನ ಆರೋಗ್ಯ ಅವಶ್ಯಕ : ಡಾ.ಬಿ. ಕೃಷ್ಣರಾವ್
ಬಳ್ಳಾರಿ, 20 ಮೇ (ಹಿ.ಸ.) : ಆ್ಯಂಕರ್ : ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹಸಿರು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಕೆರೆಯ ಹೂಳಿನ ಬಳಕೆ ಅತ್ಯಂತ ಅವಶ್ಯಕ ಎಂದು ಐಸಿಎಆರ್ - ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಾ.ಬಿ. ಕೃಷ್ಣರಾವ್ ಅವರು ಹೇಳಿದ್ದಾರೆ. ಐಸಿಎಆರ್ - ಭಾರತೀಯ
Soil health is essential for sustainable agriculture.


ಬಳ್ಳಾರಿ, 20 ಮೇ (ಹಿ.ಸ.) :

ಆ್ಯಂಕರ್ : ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹಸಿರು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಕೆರೆಯ ಹೂಳಿನ ಬಳಕೆ ಅತ್ಯಂತ ಅವಶ್ಯಕ ಎಂದು ಐಸಿಎಆರ್ - ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಾ.ಬಿ. ಕೃಷ್ಣರಾವ್ ಅವರು ಹೇಳಿದ್ದಾರೆ.

ಐಸಿಎಆರ್ - ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆ ವತಿಯಿಂದ ‘ಮೇರಾ ಗಾಂವ್ ಮೇರಾ ಗೌರವ್’ ಕಾರ್ಯಕ್ರಮದಡಿ, ಇಫೆÇ್ಕೀ ಸಹಯೋಗದೊಂದಿಗೆ ‘ಸ್ಮಾರ್ಟ್ ರಸಗೊಬ್ಬರ ಬಳಕೆ, ಪೆÇೀಷಕಾಂಶ ಬಳಕೆ ದಕ್ಷತೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತು ಬಳ್ಳಾರಿ ತಾಲ್ಲೂಕಿನ ಬಿ.ಬೆಳಗಲ್ ತಾಂಡಾದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮತೋಲಿತ ರಸಗೊಬ್ಬರ ಬಳಕೆ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳು, ದನ ಹಾಗೂ ಆಡು ಸಾಕಣೆ ಮತ್ತು ತರಕಾರಿ ಬೆಳೆಗಳ ಮಹತ್ವದ ಅರಿವು ಹೊಂದಬೇಕು ಎಂದರು.

ಮಣ್ಣು ವಿಭಾಗದ ಹಿರಿಯ ವಿಜ್ಞಾನಿ ಡಾ. ಮಹಿಪಾಲ್ ಚೌಧರಿ ಅವರು ಮಾತನಾಡಿ, ಸುಸ್ಥಿರ ಕೃಷಿಗಾಗಿ ಸರಿಯಾದ ಸಮಯ ಮತ್ತು ನಿಖರ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಬೇಕು. ಬೇವು ಲೇಪಿತ ಯೂರಿಯಾ ಹಾಗೂ ಗಂಧಕ ಲೇಪಿತ ಯೂರಿಯಾದಂತಹ ನಿಧಾನವಾಗಿ ಬಿಡುಗಡೆಯಾಗುವ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ಹಣ್ಣು ವಿಭಾಗದ ವಿಜ್ಞಾನಿ ಅನುಷಾ ಎನ್. ಎಂ. ಅವರು ಮಾತನಾಡಿ, ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆಯೇ ರಸಗೊಬ್ಬರಗಳನ್ನು ಬಳಸುವುದರಿಂದ ಕೃಷಿ ವೆಚ್ಚ ಕಡಿಮೆಯಾಗಿ, ಹೆಚ್ಚಿನ ಉತ್ಪಾದನೆ ಮತ್ತು ಉತ್ತಮ ಲಾಭ ಪಡೆಯಬಹುದು ಎಂದು ಅವರು ರೈತರಿಗೆ ಸಲಹೆ ನೀಡಿದರು. ಇಡೀ ವೇಳೆ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ಸರಿಯಾದ ವೈಜ್ಞಾನಿಕ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಬಳ್ಳಾರಿ ಇಫೆÇ್ಕೀ ಮಾರ್ಕೆಟಿಂಗ್ ಮ್ಯಾನೇಜರ್ ಹನುಮಂತ್ ಅವರು ಮಾತನಾಡಿ, ನಿಯಂತ್ರಿತ ಬಿಡುಗಡೆ ರಸಗೊಬ್ಬರಗಳಾದ ಬೇವು ಲೇಪಿತ ಯೂರಿಯಾ ಮತ್ತು ನ್ಯಾನೋ ರಸಗೊಬ್ಬರಗಳ ಪ್ರಯೋಜನಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಇಫೆÇ್ಕೀ ಉತ್ಪನ್ನಗಳ ಪ್ರದರ್ಶನ ಹಾಗೂ ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಿಸುವ ಅತ್ಯಾಧುನಿಕ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಡ್ರೋನ್ ತಂತ್ರಜ್ಞಾನದ ಬಳಕೆಯಿಂದ ಸಮಯ, ಕಾರ್ಮಿಕ ವೆಚ್ಚ ಹಾಗೂ ರಸಗೊಬ್ಬರದ ವ್ಯರ್ಥ ಬಳಕೆ ತಗ್ಗುವುದರ ಜೊತೆಗೆ, ನಿಖರವಾಗಿ ಮತ್ತು ಸರಿಯಾದ ಸಮಯದಲ್ಲಿ ಸಿಂಪಡಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಪುರುಷ ರೈತರು, ಮಣ್ಣಿನ ಆರೋಗ್ಯದ ಸುಧಾರಣೆ, ಸಮತೋಲನಿತ ರಸಗೊಬ್ಬರ ಹಾಗೂ ನಿಯಂತ್ರಿತ ಬಿಡುಗಡೆ ರಸಗೊಬ್ಬರಗಳ ಬಳಕೆಯ ಮೂಲಕ ಕೃಷಿಯಲ್ಲಿ ದಕ್ಷತೆ ಮತ್ತು ಲಾಭದಾಯಕತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಕುರಿತು ಮಾಹಿತಿ ಪಡೆದುಕೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande