ನೈರುತ್ಯ ರೈಲ್ವೆ ಮ್ಯಾನೇಜರ್ ಗೆ ಮನವಿ ಸಲ್ಲಿಸಿದ ಕರಾರೈಕ್ರಿ ಸಮಿತಿ
ಬೆಂಗಳೂರಿ ಗೆ.
ನೈರುತ್ಯ ರೈಲ್ವೆ ಮೇನೇಜರ್ಗೆ ಮನವಿ ಸಲ್ಲಿಸಿದ ಕರಾರೈಕ್ರಿ ಸಮಿತಿ


ನೈರುತ್ಯ ರೈಲ್ವೆ ಮೇನೇಜರ್ಗೆ ಮನವಿ ಸಲ್ಲಿಸಿದ ಕರಾರೈಕ್ರಿ ಸಮಿತಿ


ಬಳ್ಳಾರಿ, 16 ಮೇ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಪಿ. ಅನಂತ್ ಅವರನ್ನು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಶನಿವಾರ ಭೇಟಿ ಮಾಡಿ, ಹೊಸ ರೈಲ್ವೆ ಮಾರ್ಗಗಳ ಆರಂಭ ಮತ್ತು ರೈಲುಗಳ ಸುಗಮ ಸಂಚಾರ ಕುರಿತು ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು, ಬಳ್ಳಾರಿ - ಸಿರುಗುಪ್ಪ - ಸಿಂಧನೂರು ಮತ್ತು ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ನಿರ್ಮಾಣ ಮತ್ತು ಹಗಲಿನ ವೇಳೆಯಲ್ಲಿ ಬಳ್ಳಾರಿ ಟು ಬೆಂಗಳೂರಿಗೆ ಮತ್ತು ಬೆಂಗಳೂರು ಟು ಬಳ್ಳಾರಿಗೆ ಇಂಟರ್ಸಿಟಿ ಸೂಪರ್ ಫಾಸ್ಟ್ ಅಥವಾ ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದರು.

ಹೊಸಪೇಟೆಯಿಂದ ಹೊರಡುವ ಮುಂಬೈ ರೈಲಿಗೆ ಸಂಪರ್ಕ ಕಲ್ಪಿಸಲು ಬಳ್ಳಾರಿಯಿಂದ ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಗೆ ಹೋಗಿ ಬರಲು ಡೆಮೋ ಇಲ್ಲವೇ - ಮೆಮೊ ರೈಲು ಚಾಲನೆ ಮಾಡಬೇಕು.

ನಿಲುಗಡೆ ಆಗಿರುವ ಶಿವಮೊಗ್ಗ - ಬಳ್ಳಾರಿ - ಚೆನ್ನೈ ರೈಲನ್ನು ಪುನರಾರಂಭ ಮಾಡಬೇಕು. ಹಂಪಿ ಎಕ್ಸ್ಪ್ರೆಸ್ ರೈಲಿಗೆ ಈ ಹಿಂದಿನಂತೆ 12 ಸ್ಲೀಪರ್ ಭೋಗಿಗಳನ್ನು ಅಳವಡಿಸಬೇಕು. ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಬಳ್ಳಾರಿ ರೈಲ್ವೆ ಅಭಿವೃದ್ಧಿಗೆ ಬಿಡುಗಡೆ ಆಗಿರುವ 17 ಕೋಟಿ ರೂಪಾಯಿ ಮೊತ್ತದ ಅನುದಾನದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.

ಡಿಆರ್ಯುಸಿಸಿ ಸದಸ್ಯ ಕೆ.ಎಂ. ಕೊಟ್ರೇಶ್, ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಪಿ. ಬಂಡೇಗೌಡ, ಶಿವಶಂಕರಗೌಡ, ಬಂಡ್ರಾಳು ಮೃತ್ಯುಂಜಯಸ್ವಾಮಿ, ಕೊಳಗಲ್ಲು ಅಂಜಿನಿ, ಎಚ್.ಕೆ. ಗೌರಿಶಂಕರ, ಕೆ.ಎಂ. ಶರಣಬಸವ, ಜಿ. ಮಧುಸೂದನ ಗೌಡ, ವಿ. ಸೂರ್ಯಪ್ರಕಾಶ್, ಮೂರಿಗೆರೆ ಕೊಟ್ರೇಶ, ಎಚ್.ಎಂ. ಅಮರೇಶ್, ಶಂಕರ್ಮೂರ್ತಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande