





ಕುಡತಿನಿ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೆಐಡಿಬಿಯು ಅರ್ಸೆಲರ್ ಮಿತ್ತೆಲ್ ಕಂಪನಿಗಾಗಿ ಸ್ವಾಧೀನ ಮಾಡಿಕೊಂಡಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಿರುವುದನ್ನು ಖಂಡಿಸಿ ಪ್ರತಿಭಟನಾ ನಿರತರನ್ನು ಬಂಧಿಸಿದ್ದನ್ನು ಖಂಡಿಸಿ ಬುಧವಾರ ಕೈಗೊಂಡಿದ್ದ `ಕುಡತಿನಿ-ಸಂಡೂರು' ಪಾದಯಾತ್ರಿಗಳನ್ನು ಪೊಲೀಸರು ವಶಕ್ಕೆ ಪಡೆದು, ತೋರಣಗಲ್ಲು ಸರ್ಕಾರಿ ಶಾಲೆಯಲ್ಲಿ ಇರಿಸಿದ್ದಾರೆ.
ಪೊಲೀಸರು ಭೂ ಸಂತ್ರಸ್ತರ ಪಾದಯಾತ್ರೆಗೆ ಪರವಾನಿಗೆ ನೀಡಿರಲಿಲ್ಲ. ಆದರೂ, ಭೂ ಸಂತ್ರಸ್ತರು ಬುಧವಾರ ಬೆಳಗ್ಗೆಯಿಂದಲೇ ಸಂಡೂರು ಪಟ್ಟಣಕ್ಕೆ ಕುಡತಿನಿಯಿಂದ ಪಾದಯಾತ್ರೆ ಪ್ರಾರಂಭಿಸಿದ್ದರು. ಪಾದಯಾತ್ರಿಗಳು ತೋರಣಗಲ್ಲು ತಲುಪುತ್ತಿದ್ದಂತೆಯೇ ಪೊಲೀಸರು 123 ಪುರುಷರು, 37 ಮಹಿಳೆಯರನ್ನು ವಶಕ್ಕೆ ಪಡೆದು ತೋರಣಗಲ್ಲಿನ ಸರ್ಕಾರಿ ಶಾಲೆಗೆ ಕಳುಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್