
ವಿಜಯಪುರ, 08 ಮಾರ್ಚ್ (ಹಿ.ಸ.)
ಆ್ಯಂಕರ್ : ಬಣ್ಣಗಳ ಹಬ್ಬ ರಂಗ ಪಂಚಮಿಯು ಎಲ್ಲರ ಜೀವನದಲ್ಲಿ ಹೊಸ ಹರ್ಷ, ಉತ್ಸಾಹ ಮತ್ತು ಸೌಹಾರ್ದತೆಯನ್ನು ತರಲಿ ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜಿಲ್ಲೆ ಜನತೆಗೆ ಹಾರೈಸಿದರು.
ವಿಜಯಪುರ ನಗರದಲ್ಲಿಂದು ರಂಗಪಂಚಮಿ ಹಬ್ಬದ ಪ್ರಯುಕ್ತ ಜಿಲ್ಲೆ ಜನರಿಗೆ ಸಚಿವರು ಪ್ರಕಟಣೆಯಲ್ಲಿ ಶುಭ ಕೊರಿದರು.
ವಿವಿಧ ಬಣ್ಣಗಳು ಹೇಗೆ ಒಂದಾಗಿ ಸಂಭ್ರಮವನ್ನು ಹೆಚ್ಚಿಸುತ್ತವೆಯೋ, ಹಾಗೆಯೇ ನಮ್ಮೆಲ್ಲರ ಬಾಂಧವ್ಯವು ಪ್ರೀತಿ ಮತ್ತು ಸಹಬಾಳ್ವೆಯಿಂದ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಈ ಬಣ್ಣದ ಹಬ್ಬವು ನಿಮ್ಮ ಮನಸ್ಸು ಹಾಗೂ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಸಚಿವ ಶಿವಾನಂದ ಪಾಟೀಲ ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande