ಬೇಸಿಗೆ ತಾಪಮಾನ ಏರಿಕೆ: ಎಚ್ಚರಿಕೆ ಅಗತ್ಯ; ಡಾ. ಸುರೇಂದ್ರ ಬಾಬು
ರಾಯಚೂರು, 04 ಮಾರ್ಚ್ (ಹಿ.ಸ.): ಆ್ಯಂಕರ್: ತಾಪಮಾನ ಏರಿಕೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಮನವಿ ಮಾಡಿದ್ದಾರೆ. ಮಾಡಬೇಕಾದುದು:
ಬೇಸಿಗೆ ತಾಪಮಾನ ಏರಿಕೆ: ಎಚ್ಚರಿಕೆ ಅಗತ್ಯ; ಡಾ. ಸುರೇಂದ್ರ ಬಾಬು


ರಾಯಚೂರು, 04 ಮಾರ್ಚ್ (ಹಿ.ಸ.):

ಆ್ಯಂಕರ್:

ತಾಪಮಾನ ಏರಿಕೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಮನವಿ ಮಾಡಿದ್ದಾರೆ.

ಮಾಡಬೇಕಾದುದು:

ಸಡಿಲ ಹತ್ತಿ ಬಟ್ಟೆ ಧರಿಸಬೇಕು, ಸಾಕಷ್ಟು ನೀರು–ಮಜ್ಜಿಗೆ–ಎಳೆನೀರು ಕುಡಿಯಬೇಕು, ಹೊರಗೆ ಹೋಗುವಾಗ ನೀರು ಜೊತೆಗೆ ಇರಿಸಬೇಕು, ಶುದ್ಧ ಆಹಾರ ಸೇವಿಸಬೇಕು, ಕೈ ತೊಳೆಯುವ ಅಭ್ಯಾಸ ಪಾಲಿಸಬೇಕು.

ಮಾಡಬಾರದದ್ದು:

ಗಾಢ/ಬಿಗಿಯಾದ ಬಟ್ಟೆ ಧರಿಸಬಾರದು, ಸೋಡಾ–ಕಾಫಿ–ಮದ್ಯಪಾನ ತಪ್ಪಿಸಬೇಕು, ಮಸಾಲೆಯುಕ್ತ ಆಹಾರ ಸೇವಿಸಬಾರದು, ಶುದ್ಧೀಕರಿಸದ ನೀರು ಕುಡಿಯಬಾರದು.

ಶಾಖಾಘಾತ ಲಕ್ಷಣಗಳು:

ಗಾಬರಿ, ಸ್ಪಷ್ಟವಲ್ಲದ ಮಾತು, ಅರೆಪ್ರಜ್ಞೆ, ದೇಹದ ಉಷ್ಣತೆ ಹೆಚ್ಚಳ.

ತುರ್ತು ಕ್ರಮ:

ನೆರಳಿಗೆ ಸ್ಥಳಾಂತರಿಸಿ, ಬಟ್ಟೆ ಸಡಿಲಗೊಳಿಸಿ, ಸಾಮಾನ್ಯ ನೀರಿನಿಂದ ಒರೆಸಿ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದರೆ 108ಕ್ಕೆ ಕರೆ ಮಾಡಬೇಕು.

ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande