
ಬೆಂಗಳೂರು, 26 ಮಾರ್ಚ್ (ಹಿ.ಸ.):
ಆ್ಯಂಕರ್:ಪಿತೃವಾಕ್ಯ ಪರಿಪಾಲಕ, ಆದರ್ಶ ಪುರುಷ ಶ್ರೀ ರಾಮನ ಜನ್ಮೋತ್ಸವವಾದ ರಾಮ ನವಮಿ ಅಂಗವಾಗಿ ಗೃಹ ಸಚಿವ ಜಿ. ಪರಮೇಶ್ವರ ರಾಜ್ಯದ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಎಕ್ಸ ಸಂದೇಶದಲ್ಲಿ ಅವರು, “ಪ್ರಜೆಗಳನ್ನು ದೇವರಂತೆ ಕಂಡ ಸತ್ಯ ಮತ್ತು ಧರ್ಮದ ಸಾಕಾರಮೂರ್ತಿಯಾದ ಶ್ರೀರಾಮನು ಎಲ್ಲರಿಗೂ ಆದರ್ಶ ಪುರುಷ. ಅವರ ಜೀವನ ಮೌಲ್ಯಗಳು ಸಮಾಜಕ್ಕೆ ಮಾರ್ಗದರ್ಶಕವಾಗಿವೆ” ಎಂದು ತಿಳಿಸಿದ್ದಾರೆ.
ನಾಡಿನೆಲ್ಲೆಡೆ ಪ್ರೀತಿ, ಶಾಂತಿ ಮತ್ತು ಸಂತೋಷ ನೆಲೆಸಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa