ಯಲಹಂಕದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ
ಯಲಹಂಕ, 22 ಮಾರ್ಚ್ (ಹಿ.ಸ.): ಆ್ಯಂಕರ್: ಯಲಹಂಕದ ಸೋಲದೇವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಹಲವಾರು ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಎಸ್.ಆರ್.ವಿಶ್ವನಾಥ ಅವರ ಸಮ್ಮುಖದಲ್ಲಿ ಮಲ್ಲಪ್ಪ, ಬಸವರಾಜು, ದೇವಪ್ಪ, ಮಾಳಪ್ಪ, ಗಿಡ
Bjp


ಯಲಹಂಕ, 22 ಮಾರ್ಚ್ (ಹಿ.ಸ.):

ಆ್ಯಂಕರ್:

ಯಲಹಂಕದ ಸೋಲದೇವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಹಲವಾರು ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಎಸ್.ಆರ್.ವಿಶ್ವನಾಥ ಅವರ ಸಮ್ಮುಖದಲ್ಲಿ ಮಲ್ಲಪ್ಪ, ಬಸವರಾಜು, ದೇವಪ್ಪ, ಮಾಳಪ್ಪ, ಗಿಡ್ಡೇಗೌಡರು ಸೇರಿದಂತೆ ಎಸ್‌ಸಿ ಕಾಲೋನಿಯಿಂದ ನಾಗರಾಜು, ಮಂಜುನಾಥ್, ರವಿಕುಮಾರ್ ಹಾಗೂ ಇತರರು ಪಕ್ಷಕ್ಕೆ ಸೇರ್ಪಡೆಯಾದರು.

ಹೊಸ ಸೇರ್ಪಡೆಗೊಂಡ ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಿದ ವಿಶ್ವನಾಥ್ ಅವರು, ಪಕ್ಷದ ತತ್ವ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವಂತೆ ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande