
ಬಾಗಲಕೋಟೆ, 19 ಮಾರ್ಚ್ (ಹಿ.ಸ.)
ಆ್ಯಂಕರ್ : ನಿರಂತರವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಪರಿಣಾಮ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುರಿ-ಆಡುಗಳು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಯಂಡಗೇರಿ ಗ್ರಾಮದ ಕುರಿದಡ್ಡಿಯಲ್ಲಿದ್ದ ಹುಸೇನಸಾಬ ಬಾಂಗದ ಅವರಿಗೆ ಸೇರಿದ ಕುರಿ-ಆಡುಗಳು ಅಕಾಲಿಕ ಆಲಿಕಲ್ಲು ಮಳೆಗೆ ಸಿಲುಕಿ ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಏಕಾಏಕಿ ಸುರಿದ ಮಳೆ ಮತ್ತು ಭಾರೀ ಆಲಿಕಲ್ಲಿನ ಪರಿಣಾಮ ಪಶು ಸಂಪತ್ತಿಗೆ ದೊಡ್ಡ ಹಾನಿಯಾಗಿದೆ.
ಈ ಘಟನೆದಿಂದ ಕುರಿಗಾಯಿಯಾದ ಹುಸೇನಸಾಬ ಬಾಂಗದ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ. ಪಶುಸಂಗೋಪನೆ ಮೇಲೆ ಅವಲಂಬಿತವಾಗಿದ್ದ ಕುಟುಂಬಕ್ಕೆ ಇದು ಭಾರೀ ಹೊಡೆತವಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಬೇಕು. ಲಕ್ಷಾಂತರ ಮೌಲ್ಯದ ಕುರಿ-ಆಡುಗಳ ಸಾವಿನಿಂದ ಕುರಿಗಾಯಿ ಹುಸೇನ್ ನಷ್ಟವಾಗಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕುರಿಗಾಯಿ ಹುಸೇನ್ ಕುಟುಂಬ ಆಗ್ರಹಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande