
ಧಾರವಾಡ, 19 ಮಾರ್ಚ್ (ಹಿ.ಸ.):
ಆ್ಯಂಕರ್:
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ 24ರ ನವಲೂರು ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ, ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಇಂದು ಶಾಸಕ ಅರವಿಂದ ಬೆಲ್ಲದ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶಿವಣ್ಣ ಬಡವಣ್ಣವರ, ಪ್ರಮುಖರಾದ ಮನೋಹರ್ ಮೋರೆ, ಮುಖಂಡರಾದ ಸಿ. ಜಿ ಹಿರೇಮಠ, ಎಸ್ ಬಿ ಪಾಟೀಲ್, ಪರಶುರಾಮ ಮಾನೆ, ಪುಂಡಲಿಕ ತಳವಾರ, ರಾಮಣ್ಣ ಘಾಟಗೆ, ಪ್ರಕಾಶ ಬೆಂಗೇರಿ, ರಾಮಣ್ಣ ಕಿತ್ತೂರ, ಪ್ರಕಾಶ್ ಕಿತ್ತೂರು, ಚಂದ್ರು ಬಡವಣ್ಣವರ, ಬಸವರಾಜ ಬಿರ್ಕಿ, ಪ್ರಕಾಶ್ ತೆಲಗಾರ ಸೇರಿದಂತೆ ಇನ್ನಿತರ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa