ವಿಜಯಪುರದಲ್ಲಿ ರಂಭಾಪುರಿ ಮಹಾಪೀಠದ ಶಾಖಾ ಮಠಕ್ಕೆ ಭೂಮಿಪೂಜೆ
ವಿಜಯಪುರ, 14 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ನಗರದ ನವರಸಪುರದಲ್ಲಿರುವ ಸುರಭಿ ಸಿದ್ದೇಶ್ವರ ಲೇಔಟ್ನಲ್ಲಿ ಜಗದ್ಗುರು ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಪ್ರಥಮ ಶಾಖಾ ಮಠದ ಭೂಮಿಪೂಜೆ ಕಾರ್ಯಕ್ರಮ ಇಂದು ನಡೆಯಲಿದೆ. ಪರಮಪೂಜ್ಯ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾ
ಮಠ


ವಿಜಯಪುರ, 14 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ನಗರದ ನವರಸಪುರದಲ್ಲಿರುವ ಸುರಭಿ ಸಿದ್ದೇಶ್ವರ ಲೇಔಟ್ನಲ್ಲಿ ಜಗದ್ಗುರು ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಪ್ರಥಮ ಶಾಖಾ ಮಠದ ಭೂಮಿಪೂಜೆ ಕಾರ್ಯಕ್ರಮ ಇಂದು ನಡೆಯಲಿದೆ.

ಪರಮಪೂಜ್ಯ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ನಾಡಿನ ಅನೇಕ ಮಠಾಧೀಶರ ಸಮ್ಮುಖದಲ್ಲಿ ಈ ಪವಿತ್ರ ಕಾರ್ಯಕ್ರಮ ನೆರವೇರಲಿದೆ.

ದಶಕಗಳ ಕಾಲ ಭಕ್ತರ ಮನದಲ್ಲಿ ಮೂಡಿದ್ದ ಶಾಖಾ ಮಠ ಸ್ಥಾಪನೆಯ ಕನಸು ಇದೀಗ ಸಾಕಾರವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮ, ದಾಸೋಹ ಮತ್ತು ಬಸವ ತತ್ವಗಳ ಪ್ರಸಾರಕ್ಕೆ ಈ ಶಾಖಾ ಮಠವು ಪ್ರಮುಖ ಕೇಂದ್ರವಾಗಲಿದೆ ಎಂದು ಹೇಳಲಾಗಿದೆ.

ವಿಜಯಪುರದಲ್ಲಿ ಈ ಮಠದ ಸ್ಥಾಪನೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ತಿಳಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande