ಕೃತಕ ಬುದ್ಧಿಮತ್ತೆಯಲ್ಲಿ ಪಾರದರ್ಶಕತೆ ಅತ್ಯಗತ್ಯ : ಪ್ರಧಾನಿ ಮೋದಿ
ನವದೆಹಲಿ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗುರುವಾರ ನಡೆದ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ “ಸರ್ವಜನ ಹಿತಾಯ, ಸರ್ವಜನ ಸುಖಾಯ” ಮೌಲ್ಯಾಧಾರಿತ ದೃಷ್ಟಿಕೋನವನ್ನು ಜಗತ್ತಿನ ಮುಂದೆ ಮಂಡಿಸಿದರು. ಎಐ ಅನ್ನು ಜಾಗತಿಕ ಒಳಿತಾಗಿ ರೂಪಿಸುವ ಸಂಕಲ್ಪವನ್ನು ಇಂದು
Pm


ನವದೆಹಲಿ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗುರುವಾರ ನಡೆದ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ “ಸರ್ವಜನ ಹಿತಾಯ, ಸರ್ವಜನ ಸುಖಾಯ” ಮೌಲ್ಯಾಧಾರಿತ ದೃಷ್ಟಿಕೋನವನ್ನು ಜಗತ್ತಿನ ಮುಂದೆ ಮಂಡಿಸಿದರು. ಎಐ ಅನ್ನು ಜಾಗತಿಕ ಒಳಿತಾಗಿ ರೂಪಿಸುವ ಸಂಕಲ್ಪವನ್ನು ಇಂದು ಕೈಗೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು.

20 ರಾಷ್ಟ್ರಗಳ ನಾಯಕರೂ 45 ರಾಷ್ಟ್ರಗಳ ಸಚಿವರೂ ಭಾಗವಹಿಸಿದ್ದ ಸಭೆಯಲ್ಲಿ ಪ್ರಧಾನಿ, ಎಐ ಕ್ಷೇತ್ರದಲ್ಲಿ ಪಾರದರ್ಶಕತೆ ಅತ್ಯಂತ ಮುಖ್ಯ ಎಂಬುದನ್ನು ಒತ್ತಿ ಹೇಳಿದರು. ಕೆಲವು ದೇಶಗಳು ಮತ್ತು ಕಂಪನಿಗಳು ಎಐ ಅನ್ನು ಕಾರ್ಯತಂತ್ರದ ಸಾಧನವಾಗಿ ಬಳಸಲು ಯೋಚಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತ ಮಾನವಕೇಂದ್ರಿತ ಮತ್ತು ಹೊಣೆಗಾರಿಕೆಯಿಂದ ಕೂಡಿದ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಎಐ ಎದುರಿಸುತ್ತಿರುವ ಸವಾಲುಗಳಾದ ನಕಲಿ ವಿಷಯಗಳು (ಡೀಪ್‌ಫೇಕ್‌ಗಳು) ಕುರಿತು ಉಲ್ಲೇಖಿಸಿದ ಅವರು, ಆಹಾರ ಪದಾರ್ಥಗಳಿಗೆ ಸರಿಯಾದ ಪದಾರ್ಥಗಳ ಲೇಬಲ್ ಹಾಕುವಂತೆ ಡಿಜಿಟಲ್ ವಿಷಯಗಳಿಗೂ ಸ್ಪಷ್ಟ ಲೇಬಲಿಂಗ್ ಅಗತ್ಯವಿದೆ ಎಂದು ಹೇಳಿದರು.

ಎಐ ಅನ್ನು ಮಾನವ ಇತಿಹಾಸದ ಅತ್ಯಂತ ಪರಿವರ್ತಕ ನವೀನತೆ ಎಂದು ಬಣ್ಣಿಸಿದ ಪ್ರಧಾನಿ, ಅದರ ವೇಗ ಮತ್ತು ವ್ಯಾಪ್ತಿ ಹಿಂದಿನ ಯಾವುದೇ ತಂತ್ರಜ್ಞಾನಕ್ಕಿಂತ ಹೆಚ್ಚಾಗಿದೆ ಎಂದರು. ಆದ್ದರಿಂದ, ಅದರ ವಿನಾಶಕಾರಿ ಪರಿಣಾಮಗಳನ್ನು ತಪ್ಪಿಸಲು ಜಾಗತಿಕ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಜಾಗತಿಕ ದಕ್ಷಿಣದ ರಾಷ್ಟ್ರಗಳನ್ನು ಪ್ರತಿನಿಧಿಸಿದ ಅವರು, ಎಐಯನ್ನು ಪ್ರಜಾಪ್ರಭುತ್ವಗೊಳಿಸಿ, ಸೇರ್ಪಡೆ ಮತ್ತು ಸಬಲೀಕರಣದ ಸಾಧನವಾಗಿಸುವತ್ತ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande