
ನವದೆಹಲಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ ನವೀನ್ ಗೌರವ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “‘ಹಿಂದವಿ ಸ್ವರಾಜ್ಯ’ದ ಮಹಾನ್ ಪ್ರತಿಪಾದಕ ಮತ್ತು ಅದಮ್ಯ ಶೌರ್ಯದ ಸಂಕೇತವಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು ನಮನಗಳು. ಅವರ ಅಸಾಧಾರಣ ಧೈರ್ಯ, ದಾರ್ಶನಿಕ ನಾಯಕತ್ವ ಮತ್ತು ಮಾತೃಭೂಮಿಗೆ ಅಚಲ ಸಮರ್ಪಣೆ ಅವರನ್ನು ದೇಶಭಕ್ತಿ, ಕರ್ತವ್ಯ ಮತ್ತು ನ್ಯಾಯದ ಮಾದರಿಯಾಗಿ ಸ್ಥಾಪಿಸಿತು” ಎಂದು ಬರೆದಿದ್ದಾರೆ.
ಶಿವಾಜಿ ಮಹಾರಾಜರ ಜೀವನವು ಇಂದಿನ ಪೀಳಿಗೆಗಳಿಗೆ ಸ್ವಾಭಿಮಾನ, ಸಂಘಟನೆ ಹಾಗೂ ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಸ್ಫೂರ್ತಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 19, 1630 ರಂದು ಇಂದಿನ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಶಿವನೇರಿ ಕೋಟೆಯಲ್ಲಿ ಜನಿಸಿದ ಶಿವಾಜಿ ಮಹಾರಾಜರು, ಮರಾಠಾ ಸೇನಾಧಿಪತಿ ಶಹಾಜಿ ಭೋಂಸ್ಲೆಯವರ ಪುತ್ರರಾಗಿದ್ದರು. ಅವರ ತಾಯಿ ಜೀಜಾಬಾಯಿ ಅವರ ಧಾರ್ಮಿಕ ಮತ್ತು ಸಂಸ್ಕಾರಪೂರ್ಣ ಪ್ರಭಾವವು ಶಿವಾಜಿ ಮಹಾರಾಜರ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿತು.
ಧೀರ ಮರಾಠಾ ಯೋಧನಾಗಿ ಹೊರಹೊಮ್ಮಿದ ಅವರು ಹಿಂದವಿ ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿ, ಅನೇಕ ಯುದ್ಧಗಳಲ್ಲಿ ಮೊಘಲರ ವಿರುದ್ಧ ವಿಜಯಗಳಿಸಿ ನೂರಾರು ಕೋಟೆಗಳನ್ನು ವಶಪಡಿಸಿಕೊಂಡ ಸಾಧನೆಗೈದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa