ಸಮಾಜದ ಕಲ್ಯಾಣಕ್ಕಾಗಿ ಬಳಕೆಯಾದಾಗ ಮಾತ್ರ ಎಐ ಅರ್ಥಪೂರ್ಣ : ಪ್ರಧಾನಿ ಮೋದಿ
ನವದೆಹಲಿ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಸಮಾಜದ ಹೆಚ್ಚಿನ ಒಳಿತಿಗಾಗಿ ಬಳಸಿದಾಗ ಮಾತ್ರ ಅವು ನಿಜವಾದ ಅರ್ಥ ಪಡೆಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ ಉಲ್ಲೇಖಿಸಿರುವ ಅವರು, ವಿಜ್ಞಾನ–ತಂ
Pm


ನವದೆಹಲಿ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಸಮಾಜದ ಹೆಚ್ಚಿನ ಒಳಿತಿಗಾಗಿ ಬಳಸಿದಾಗ ಮಾತ್ರ ಅವು ನಿಜವಾದ ಅರ್ಥ ಪಡೆಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ ಉಲ್ಲೇಖಿಸಿರುವ ಅವರು, ವಿಜ್ಞಾನ–ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಉಪಯುಕ್ತವಾಗಿಸಲು ಬುದ್ಧಿವಂತಿಕೆ, ವೈಚಾರಿಕತೆ ಮತ್ತು ಸಮರ್ಪಕ ನಿರ್ಧಾರ ಸಾಮರ್ಥ್ಯವೇ ಅಡಿಪಾಯ ಎಂದು ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಒಳಿತಿಗಾಗಿ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದೇ ಈ ಶೃಂಗಸಭೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಿ, ಬುದ್ಧಿಶಕ್ತಿಯ ಮಹತ್ವವನ್ನು ವಿವರಿಸಿದರು.

“ಸೇವೆ, ಶ್ರವಣ, ಗ್ರಹಿಸುವಿಕೆ, ಹಿಡಿದಿಟ್ಟುಕೊಳ್ಳುವಿಕೆ, ಭ್ರಮೆ, ಅರ್ಥದ ಜ್ಞಾನ ಮತ್ತು ಸತ್ಯದ ಜ್ಞಾನ ಇವು ಬುದ್ಧಿಶಕ್ತಿಯ ಲಕ್ಷಣಗಳು,” ಎಂದು ಉಲ್ಲೇಖಿಸಿದ ಅವರು, ಕಲಿಯುವ ಮನೋಭಾವ, ಗಮನವಿಟ್ಟು ಕೇಳುವಿಕೆ, ತರ್ಕಬದ್ಧ ಚಿಂತನೆ ಹಾಗೂ ಸತ್ಯ ಅರಿಯುವ ಬಯಕೆ ಇವೆಲ್ಲವೂ ‘ಧಿ’ ಅಂದರೆ ಬುದ್ಧಿವಂತಿಕೆಯ ಗುಣಗಳಾಗಿವೆ ಎಂದರು.

ಎಐ ಅಭಿವೃದ್ಧಿ ಹಾಗೂ ಅದರ ಜವಾಬ್ದಾರಿಯುತ ಬಳಕೆಗೆ ಇಂತಹ ಮೌಲ್ಯಗಳು ಅಗತ್ಯವೆಂದು ಅವರು ಹೇಳಿದರು. ತಾಂತ್ರಿಕ ನಿಪುಣತೆ ಮಾತ್ರ ಸಾಕಾಗದು; ನೀತಿಶಾಸ್ತ್ರ, ವಿವೇಕ ಮತ್ತು ಸಾಮಾಜಿಕ ಜವಾಬ್ದಾರಿಯೂ ಅಷ್ಟೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಉತ್ತಮ ಆಡಳಿತ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮೂಲಕ ಸಕಾರಾತ್ಮಕ ಬದಲಾವಣೆ ತರಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande