ಬಿ ಗುಡ್ ಡು ಗುಡ್–2026 ಅಭಿಯಾನದ ಅಂಗವಾಗಿ ವಾಕಥಾನ್
ಬೆಂಗಳೂರು, 11 ಜನವರಿ (ಹಿ.ಸ.) : ಆ್ಯಂಕರ್ : ಬಿ ಗುಡ್ ಡು ಗುಡ್–2026 ಅಭಿಯಾನದ ಅಂಗವಾಗಿ ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮವು ಭಾನುವಾರ ಕಬ್ಬನ್ ಪಾರ್ಕ್ ಗೇಟ್ ಮುಂಭಾಗದಲ್ಲಿ ನಡೆಯಿತು. ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದ
Walkthan


ಬೆಂಗಳೂರು, 11 ಜನವರಿ (ಹಿ.ಸ.) :

ಆ್ಯಂಕರ್ : ಬಿ ಗುಡ್ ಡು ಗುಡ್–2026 ಅಭಿಯಾನದ ಅಂಗವಾಗಿ ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮವು ಭಾನುವಾರ ಕಬ್ಬನ್ ಪಾರ್ಕ್ ಗೇಟ್ ಮುಂಭಾಗದಲ್ಲಿ ನಡೆಯಿತು.

ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿವಿಧ ವರ್ಗಗಳ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಅನುಮೋಲ್ ಕಾಮತ್ ಹಾಗೂ ವಿಕ್ರಮ ವಾರಪತ್ರಿಕೆಯ ಸಂಪಾದಕ ರಮೇಶ್ ದೊಡ್ಡಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ವಾಕಥಾನ್‌ಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಇಂತಹ ಜನಸಹಭಾಗಿತ್ವದ ಚಟುವಟಿಕೆಗಳು ಅಗತ್ಯವಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande