ವಿಜಯಪುರದಲ್ಲಿ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ವಿಜಯಪುರ, 11 ಜನವರಿ (ಹಿ.ಸ.) : ಆ್ಯಂಕರ್ : ಸುಮಾರು 1000 ವರ್ಷಗಳ ಹಿಂದೆ, ಅಂದರೆ 1026ರ ಜನವರಿ ತಿಂಗಳಲ್ಲಿ ಮಹಮದ್ ಘಜ್ನಿ ದಾಳಿಯಿಂದ ಲೂಟಿಯಾಗಿದ್ದರೂ, ಒಟ್ಟು 17 ಬಾರಿ ದಾಳಿಗೊಳಗಾದರೂ ಪ್ರತಿ ಬಾರಿಯೂ ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಸೋಮನಾಥ ದೇವಾಲಯದ್ದು. ಸ್ವತಂತ್ರ ಭಾರ
ಪೂಜೆ


ವಿಜಯಪುರ, 11 ಜನವರಿ (ಹಿ.ಸ.) :

ಆ್ಯಂಕರ್ : ಸುಮಾರು 1000 ವರ್ಷಗಳ ಹಿಂದೆ, ಅಂದರೆ 1026ರ ಜನವರಿ ತಿಂಗಳಲ್ಲಿ ಮಹಮದ್ ಘಜ್ನಿ ದಾಳಿಯಿಂದ ಲೂಟಿಯಾಗಿದ್ದರೂ, ಒಟ್ಟು 17 ಬಾರಿ ದಾಳಿಗೊಳಗಾದರೂ ಪ್ರತಿ ಬಾರಿಯೂ ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಇತಿಹಾಸ ಸೋಮನಾಥ ದೇವಾಲಯದ್ದು. ಸ್ವತಂತ್ರ ಭಾರತದಲ್ಲಿ 1951ರ ಮೇ 11ರಂದು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಜ್ಯೋತಿರ್ಲಿಂಗವನ್ನು ಪುನಃ ಪ್ರತಿಷ್ಠಾಪಿಸಿದರು. ಈ ಐತಿಹಾಸಿಕ ಘಟನೆಗೆ ಇದೀಗ 75 ವರ್ಷಗಳು ತುಂಬಿವೆ.

ಈ ಸುಂದರ ಗಳಿಗೆಯ ಪ್ರಯುಕ್ತ ವಿಜಯಪುರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಗರದಲ್ಲಿನ 400 ವರ್ಷಗಳಷ್ಟು ಪುರಾತನ ಶಿವನ ದೇವಾಲಯವಾದ ಸುಂದರೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆಯನ್ನು ನೆರವೇರಿಸಲಾಯಿತು. ಈ ಮೂಲಕ ಸೋಮನಾಥ ದೇವಾಲಯವು ಸನಾತನ ಧರ್ಮದ ಅದಮ್ಯ ಚೇತನದ ಪ್ರತೀಕ ಎಂಬುದನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಚಂದ್ರಶೇಖರ ಕವಟಗಿ ಅವರು, ಸೋಮನಾಥ ದೇವಾಲಯದ ಸಂಪೂರ್ಣ ಇತಿಹಾಸ, ಅದರ ಮೇಲೆ ನಡೆದ ಆಕ್ರಮಣಗಳು ಹಾಗೂ ದೇವಾಲಯದ ಪುನರುತ್ಥಾನದ ಪ್ರಮುಖ ಬೆಳವಣಿಗೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಚಿದಾನಂದ ಚಲವಾದಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಜೋಗೂರ, ಭೀಮಾಶಂಕರ ಹದನೂರ, ಕೃಷ್ಣಾ ಗುನ್ಹಾಳಕರ, ಸಂದೀಪ ಪಾಟೀಲ, ಶರಣಬಸು ಕುಂಬಾರ, ಭೀಮಸಿಂಗ ರಾಠೋಡ, ಚಿನ್ನು ಚಿನಗುಂಡಿ, ಭರತ ಕುಲಕರ್ಣಿ, ಶ್ರೀಮತಿ ಭಾರತಿ ಭುಯ್ಯಾರ, ರಾಜಶೇಖರ ಬಾಗಲಕೋಟ, ಅಪ್ಪು ಕುಂಬಾರ ಸೇರಿದಂತೆ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande