ಭಾರತವನ್ನು ನಾವೀನ್ಯತೆ ಆರ್ಥಿಕತೆಯನ್ನಾಗಿ ಮಾಡುವ ಸಂಕಲ್ಪಕ್ಕೆ ರಾಷ್ಟ್ರಪತಿ ಕರೆ
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೇಶವನ್ನು ಪ್ರಮುಖ ನಾವೀನ್ಯತೆ ಆರ್ಥಿಕತೆಯಾಗಿ ರೂಪಿಸಲು ಪ್ರತಿಯೊಬ್ಬ ಪಾಲುದಾರರೂ ಸಂಕಲ್ಪ ಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ. ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ ಭಾರತದ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಮಾತನಾಡಿದ
President


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೇಶವನ್ನು ಪ್ರಮುಖ ನಾವೀನ್ಯತೆ ಆರ್ಥಿಕತೆಯಾಗಿ ರೂಪಿಸಲು ಪ್ರತಿಯೊಬ್ಬ ಪಾಲುದಾರರೂ ಸಂಕಲ್ಪ ಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.

ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ ಭಾರತದ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತ ಜ್ಞಾನ ಮತ್ತು ವ್ಯಾಪಾರದ ಕೇಂದ್ರವಾಗಿದ್ದಂತೆ, ಮತ್ತೆ ವಿಶ್ವಕ್ಕೆ ಮುನ್ನಡೆಸುವ ಗುರಿ ಹೊಂದಬೇಕು ಎಂದರು.

ಕಳೆದ ದಶಕದಲ್ಲಿ ಎಂಜಿನಿಯರಿಂಗ್ ರಫ್ತು 70 ಬಿಲಿಯನ್ ಡಾಲರ್‌ನಿಂದ 115 ಬಿಲಿಯನ್ ಡಾಲರ್‌ಗಳಿಗೆ ಏರಿರುವುದನ್ನು ರಾಷ್ಟ್ರಪತಿ ಶ್ಲಾಘಿಸಿದರು. ಜಾಗತಿಕ ಸವಾಲುಗಳ ನಡುವೆಯೂ ಸಾಧನೆ ಸಾಧಿಸಿದ EEPC ದೇಶದ ಉತ್ಪಾದಕರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದೆ ಎಂದರು.

ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಭಾರತಕ್ಕೆ ದೊಡ್ಡ ಶಕ್ತಿ ಎಂದು ಹೇಳಿದರು. ವಿಶ್ವದ ಪ್ರಮುಖ ಕಂಪನಿಗಳ ಸಾಮರ್ಥ್ಯ ಕೇಂದ್ರಗಳು ಭಾರತದಲ್ಲಿರುವುದರಿಂದ, ಸರಿಯಾದ ಪ್ರೋತ್ಸಾಹ ಮತ್ತು ಪರಿಸರ ವ್ಯವಸ್ಥೆಯಿಂದ ಭಾರತವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿ ಮಾಡಬಹುದು ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande