ಮಾತಾ ವೈಷ್ಣೋದೇವಿ ಯಾತ್ರೆ, ಸತತ 11ನೇ ದಿನವೂ ಸ್ಥಗಿತ
ಜಮ್ಮು, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ಗುಹಾ ದೇವಾಲಯಕ್ಕೆ ತೀರ್ಥಯಾತ್ರೆ ಸತತ 11ನೇ ದಿನವೂ ಸ್ಥಗಿತಗೊಂಡಿದೆ. ಆಗಸ್ಟ್ 26ರಂದು ಅರ್ಧಕುಮ್ವರಿ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಯಾತ್ರಿಕರು ಮೃತಪಟ್ಟ ಬಳಿಕ ಯಾತ್ರೆಯನ್ನು ನಿಲ್ಲಿಸಲಾಗಿತ
Yatre


ಜಮ್ಮು, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ಗುಹಾ ದೇವಾಲಯಕ್ಕೆ ತೀರ್ಥಯಾತ್ರೆ ಸತತ 11ನೇ ದಿನವೂ ಸ್ಥಗಿತಗೊಂಡಿದೆ.

ಆಗಸ್ಟ್ 26ರಂದು ಅರ್ಧಕುಮ್ವರಿ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಯಾತ್ರಿಕರು ಮೃತಪಟ್ಟ ಬಳಿಕ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಇತ್ತೀಚೆಗೆ ಹವಾಮಾನ ಸುಧಾರಿಸಿದರೂ, ಸುರಕ್ಷತಾ ಕಾರಣಗಳಿಂದ ಅಧಿಕಾರಿಗಳು ಯಾತ್ರೆ ಪುನರಾರಂಭಿಸಲು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ತ್ರಿಕೂಟ ಪರ್ವತ ಪ್ರದೇಶದಲ್ಲಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಯಾತ್ರಿಕರಿಗೆ ತಮ್ಮ ಪ್ರಯಾಣವನ್ನು ಮುಂದೂಡಲು ಆಡಳಿತ ಸೂಚಿಸಿದೆ. ಯಾತ್ರೆ ಸ್ಥಗಿತದಿಂದ ಕತ್ರಾ ಬೇಸ್ ಕ್ಯಾಂಪ್ ನಿರ್ಜನವಾಗಿ, ಅಂಗಡಿಗಳು ಮತ್ತು ಹೋಟೆಲ್‌ಗಳಲ್ಲಿ ಜನರ ಸಂಚಾರವೂ ಕಡಿಮೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande